ವಿಚಾರಣೆ ವೇಳೆ ತನಿಖಾಧಿಕಾರಿಗಳು, ಪ್ರಾಸಿಕ್ಯೂಷನ್ ವಿಭಾಗದ ಸಲಹೆಗಾರರ ಪತ್ರವನ್ನು ನ್ಯಾಯಾಧೀಶರಿಗೆ ನೀಡಿದರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಹುದ್ದಾರ ಅವರು, ‘ಈತನಕ ಆರೋಪಿ ಮುನಿರತ್ನ ವಿರುದ್ಧ ನೀವು ದೂರು ದಾಖಲಿಸಿಲ್ಲ, ಹೀಗಾದರೆ ದೂರು ಕೊಟ್ಟವರು ಏನಾಗಬೇಕು, ಈ ಹಿಂದೆಯೇ ನಿರ್ದೇಶನ ನೀಡಿದ್ದರೂ ಯಾಕೆ ದೂರು ದಾಖಲಿಸಿಲ್ಲ, ಬರೀ ಸಬೂಬು ಹೇಳುತ್ತೀರಲ್ಲ, ನಿಮ್ಮಂತಹ ಪೊಲೀಸರಿಂದ ಇಡೀ ಇಲಾಖೆಯೇ ಗಬ್ಬೆದ್ದು ಹೋಗಿದೆ’ ಎಂದು ಝಾಡಿಸಿದರು.