‘ನಾನು ಪ್ರಾಮಾಣಿಕನಿದ್ದೇನೆ. ಸತ್ಯ ಹೇಳ್ತೀನಿ. ಇನ್ನೂ ಹೇಳುವುದು ಸಾಕಷ್ಟಿದೆ. ಸದನದಲ್ಲೇ ಮಾತನಾಡಿರುವುದರಿಂದ ಮಾನನಷ್ಟ ಮೊಕದ್ದಮೆ ಹೂಡಲು ಬರಲ್ಲ. ನೀವು ಸದನಕ್ಕೆ ಬಂದು ಹಕ್ಕುಚ್ಯುತಿ ಮಂಡಿಸಿ. ಅಲ್ಲಿಯೇ ಮಾತನಾಡೋಣ. ನಾನು ಯಾರಿಂದಾದರೂ ಒಂದು ರೂಪಾಯಿಯನ್ನಾದರೂ ಪಡೆದಿದ್ದೇನೆ ಎಂಬುದನ್ನು ಸಾಬೀತುಪಡಿಸಿ. ನೀವು ಹೇಳುವ ಯಾವುದೇ ದೇವಸ್ಥಾನ, ವೇದಿಕೆಗೆ ಬರಲು ನಾನು ಸಿದ್ಧನಿದ್ದೇನೆ’ ಎಂದ ಸಚಿವರು, ವಿಶ್ವನಾಥ್ ಹೆಸರನ್ನು ಉಲ್ಲೇಖಿಸದೇ ‘ಪುಣ್ಯಾತ್ಮರು’, ‘ದೊಡ್ಡವರು‘, ‘ಮಾರ್ಗದರ್ಶಕರು’ ಎಂದು ಕುಟುಕಿದರು.