<p><strong>ಗುಬ್ಬಿ(ತುಮಕೂರು):</strong> ಗುಬ್ಬಿ ತಾಲ್ಲೂಕಿನ ಅಮಾನಿಕೆರೆಯಲ್ಲಿ ಈಜಲು ಹೋಗಿ ಶ್ರೀನಿವಾಸ್, ದರ್ಶನ್ ಮತ್ತು ನಂದನ್ ಎಂಬ ಪ್ರೌಢಶಾಲಾ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.</p>.<p>ಮೂವರು ಸಮಾಜ ಕಲ್ಯಾಣ ಇಲಾಖೆ ನಡೆಸುವ ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಡುತ್ತಿದ್ದರು. ಶ್ರೀನಿವಾಸ್ 9ನೇ ತರಗತಿಯಲ್ಲಿ ಓದುತ್ತಿದ್ದರೆ, ಉಳಿದಿಬ್ಬರು 8 ನೇ ತರಗತಿಯಲ್ಲಿ ಕಲಿಯುತ್ತಿದ್ದರು.</p>.<p>ಬೆಳಗಿನ ತಿಂಡಿ ಮಾಡಿಕೊಂಡು ವಸತಿ ನಿಲಯದಿಂದ ಸುಮಾರು ಒಂದು ಕಿ.ಮೀ. ದೂರದ ಶಾಲೆಯಡೆಗೆ ಇವರು ಹೊರಟರೂ, ಆದರೆ ತರಗತಿಗಳಿಗೆ ಹಾಜರಾಗಲಿಲ್ಲ. ಮಧ್ಯಾಹ್ನ ಮತ್ತಿಬ್ಬರು ಸ್ನೇಹಿತರನ್ನು ಜತೆ ಮಾಡಿಕೊಂಡು ಸುಮಾರು ಮೂರು ಕಿ.ಮೀ.ದೂರ ಇರುವ ಕೆರೆಗೆ ಹೋಗಿದ್ದಾರೆ.</p>.<p>ಮೂವರು ಕೆರೆಗೆ ದುಮುಕಿದ್ದಾರೆ. ಬಹಳ ಹೊತ್ತಿನ ವರೆಗೂ ಅವರು ನೀರಿಂದ ಮೇಲೆ ಬರದಿದ್ದಾಗ, ಉಳಿದಿಬ್ಬರು ಚೀರಿಕೊಂಡು, ಗೋಳಾಡುತ್ತ ಸುತ್ತಲಿನ ಜನರನ್ನು ಸೇರಿಸಿದರು. ಆ ಬಳಿಕ ಹುಡುಕಾಟ ನಡೆಸಿ, ಶವಗಳನ್ನು ಹೊರ ತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ.</p>.<p>ಬೆಂಗಳೂರಿನ ಮಾರುತಿನಗರದ ವಾಸಿ ಅಶ್ವತಯ್ಯ ಅವರ ಮಗ ಶ್ರೀನಿವಾಸ್. ನಂದನ್ ಗುಬ್ಬಿ ತಾಲ್ಲೂಕಿನ ಕಲ್ಲೆನಹಳ್ಳಿಯವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ(ತುಮಕೂರು):</strong> ಗುಬ್ಬಿ ತಾಲ್ಲೂಕಿನ ಅಮಾನಿಕೆರೆಯಲ್ಲಿ ಈಜಲು ಹೋಗಿ ಶ್ರೀನಿವಾಸ್, ದರ್ಶನ್ ಮತ್ತು ನಂದನ್ ಎಂಬ ಪ್ರೌಢಶಾಲಾ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.</p>.<p>ಮೂವರು ಸಮಾಜ ಕಲ್ಯಾಣ ಇಲಾಖೆ ನಡೆಸುವ ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಡುತ್ತಿದ್ದರು. ಶ್ರೀನಿವಾಸ್ 9ನೇ ತರಗತಿಯಲ್ಲಿ ಓದುತ್ತಿದ್ದರೆ, ಉಳಿದಿಬ್ಬರು 8 ನೇ ತರಗತಿಯಲ್ಲಿ ಕಲಿಯುತ್ತಿದ್ದರು.</p>.<p>ಬೆಳಗಿನ ತಿಂಡಿ ಮಾಡಿಕೊಂಡು ವಸತಿ ನಿಲಯದಿಂದ ಸುಮಾರು ಒಂದು ಕಿ.ಮೀ. ದೂರದ ಶಾಲೆಯಡೆಗೆ ಇವರು ಹೊರಟರೂ, ಆದರೆ ತರಗತಿಗಳಿಗೆ ಹಾಜರಾಗಲಿಲ್ಲ. ಮಧ್ಯಾಹ್ನ ಮತ್ತಿಬ್ಬರು ಸ್ನೇಹಿತರನ್ನು ಜತೆ ಮಾಡಿಕೊಂಡು ಸುಮಾರು ಮೂರು ಕಿ.ಮೀ.ದೂರ ಇರುವ ಕೆರೆಗೆ ಹೋಗಿದ್ದಾರೆ.</p>.<p>ಮೂವರು ಕೆರೆಗೆ ದುಮುಕಿದ್ದಾರೆ. ಬಹಳ ಹೊತ್ತಿನ ವರೆಗೂ ಅವರು ನೀರಿಂದ ಮೇಲೆ ಬರದಿದ್ದಾಗ, ಉಳಿದಿಬ್ಬರು ಚೀರಿಕೊಂಡು, ಗೋಳಾಡುತ್ತ ಸುತ್ತಲಿನ ಜನರನ್ನು ಸೇರಿಸಿದರು. ಆ ಬಳಿಕ ಹುಡುಕಾಟ ನಡೆಸಿ, ಶವಗಳನ್ನು ಹೊರ ತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ.</p>.<p>ಬೆಂಗಳೂರಿನ ಮಾರುತಿನಗರದ ವಾಸಿ ಅಶ್ವತಯ್ಯ ಅವರ ಮಗ ಶ್ರೀನಿವಾಸ್. ನಂದನ್ ಗುಬ್ಬಿ ತಾಲ್ಲೂಕಿನ ಕಲ್ಲೆನಹಳ್ಳಿಯವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>