ಹಾಗಾದರೆ ಈ ಹಿಂದೆ ಟ್ವೀಟ್ ಮಾಡಿರುವ ಟ್ವೀಟ್ಗಳ ಬಗ್ಗೆ ನಿಲುವು ಏನು ಎಂದು ಕೇಳಿದರೆ, ಕೆಲವೊಂದು ವಿಷಯಗಳಲ್ಲಿ ನಿಲುವು ಬದಲಿಸಿದ ಸಾಧ್ಯತೆ ಇದೆ. ಇನ್ನು ಕೆಲವು ವಿಷಯಗಳಲ್ಲಿ ಇಲ್ಲ. ಅದು ಆ ಸಂದರ್ಭವನ್ನು ಅವಲಂಬಿಸಿರುತ್ತದೆ. ನಾವು ಬದುಕು ರೂಪಿಸುತ್ತೇವೆ, ಬೆಳೆಯುತ್ತೇವೆ, ನಾವು ಮನುಷ್ಯರಲ್ಲವೇ? ನಾವು ಸ್ಥಾಯಿ ಅಲ್ಲ, ನಾವು ಪರಿಪೂರ್ಣ ಜೀವಿಗಳಾಗಿ ಹುಟ್ಟುತ್ತೇವೆ. ಇದೆಲ್ಲ ಕಲಿಕೆಯ ಅನುಭವಗಳು ಎಂದು ತೇಜಸ್ವಿ ಹೇಳಿದ್ದಾರೆ.