ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಐನಾಪೂರ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ಕುರಿಗಾಹಿಗಳಾದ ಕಲ್ಲಪ್ಪ ಬಸಪ್ಪ ಪೂಜಾರಿ (25) ಮತ್ತು ಪರಮಾನಂದ ಪೂಜಾರಿ (26) ಎಂಬುವವರು ಮೃತಪಟ್ಟಿದ್ದಾರೆ.
ಗ್ರಾಮದ ಸಮೀಪದ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಭಾನುವಾರ ಸಂಜೆ ಗುಡುಗು ಸಹಿತ ಮಳೆಯಲ್ಲಿ ಸಿಡಿಲು ಬಡಿದು ಇಬ್ಬರೂ ಸಾವನ್ನಪ್ಪಿದ್ದಾರೆ. ಇನ್ನು ಇಬ್ಬರಿಗೆ ಗಾಯಗಳಾಗಿವೆ.
ಚೆಕ್ ವಿತರಣೆ: ಪ್ರಕೃತಿ ವಿಕೋಪ ನಿಧಿಯಡಿ ಕುರಿಗಾಹಿಗಳ ಕುಟುಂಬದ ಸದಸ್ಯರಿಗೆ ತಲಾ ₹ 4 ಲಕ್ಷ ಮೊತ್ತದ ಪರಿಹಾರದ ಚೆಕ್ಗಳನ್ನು ಶಾಸಕ ಡಾ.ಅಜಯಸಿಂಗ್ ನೀಡಿದರು.