‘ಟಿಪ್ಪು ಬಗ್ಗೆ ಅರ್ಧ ಡಜನ್ ಜನ ರೀಸರ್ಚ್ ಮಾಡಿದ್ದು, ಒಬ್ಬರೂ ಆತನ ಕಾರ್ಯ ವೈಖರಿಗೆ ವಿರೋಧ ವ್ಯಕ್ತಪಡಿಸಿಲ್ಲ. ಇತಿಹಾಸಕಾರರಾದ ಫರ್ನಾಂಡಿಸ್, ತಲಕಾಡು ಚಿಕ್ಕರಂಗೇಗೌಡ ಟಿಪ್ಪು ಬಗ್ಗೆ ಆಳವಾದ ಅಧ್ಯಯನ ಮಾಡಿದ್ದು ಹೊಗಳಿಕೆ ಮಾತನ್ನಾಡಿದ್ದಾರೆ. ಟಿಪ್ಪು ಸುಲ್ತಾನ್ನನ್ನು ಈ ಪ್ರಪಂಚ ಮರೆಯುವುದಿಲ್ಲ ಎಂದು ಆತನ ವಿರುದ್ಧ ಹೋರಾಡಿದ ಬ್ರಿಟಿಷ್ ಸೇನೆಯ ನಾಯಕನಾಗಿದ್ದ ಕರ್ನಲ್ ವೆಲ್ಲೆಸ್ಲಿಯೇ ಹೇಳಿದ್ದಾನೆ. ಲೇಖನಗಳನ್ನು, ಪುಸ್ತಕಗಳನ್ನು ಓದದವರ ಮಾತಿಗೆ ಮನ್ನಣೆ ನೀಡಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲು ಹೊರಟಿದೆ. ಅಧಿಕಾರ ಇದ್ದಾಗ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸರ್ಕಾರ ಈ ನಡೆಯೇ ಸಾಕ್ಷಿ’ ಎಂದು ಹಿರಿಯ ಸಾಹಿತಿ ಪ್ರೊ.ಎಂ. ಕರಿಮುದ್ದೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.