<p><strong>ಉಡುಪಿ:</strong> ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರಿಗೆ ನ.17, 1992ರಲ್ಲಿ ಸ್ವತಃ ಪೇಜಾವರ ಶ್ರೀಗಳೇ ಸನ್ಯಾಸ ದೀಕ್ಷೆ ನೀಡಿದ್ದರು. ಅಂದಿನಿಂದ ಗುರು ಹಾಗೂ ಶಿಷ್ಯೆಯರ ಬಾಂಧವ್ಯ ಗಟ್ಟಿಯಾಗಿತ್ತು.</p>.<p>ಉಮಾ ಭಾರತಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದರೂ ಗುರು ಹಾಕಿದ ಗೆರೆಯನ್ನು ಕೊನೆಯವರೆಗೂ ದಾಟಲಿಲ್ಲ. ಗುರುಪೂರ್ಣಿಯಮೆ ದಿನ ಗುರುವಂದನೆ ಸಲ್ಲಿಸುವುದನ್ನೂ ಮರೆತಿರಲಿಲ್ಲ.</p>.<p>1992ರಲ್ಲಿ ಸನ್ಯಾಸ ದೀಕ್ಷೆ ನಿರ್ಧಾರ ಮಾಡಿದ ಉಮಾ ಭಾರತಿ ನೇರವಾಗಿ ಬಂದಿದ್ದು ಉಡುಪಿಗೆ. ಪೇಜಾವರ ಶ್ರೀಗಳ ಮುಂದೆ ನಿಂತು, ಎಲ್ಲ ಬಂಧನಗಳಿಂದ ಮುಕ್ತವಾಗಬೇಕಿದೆ, ಸನ್ಯಾಸ ದೀಕ್ಷೆ ಕೊಡಿ ಎಂದು ದೈನ್ಯದಿಂದ ಬೇಡಿಕೊಂಡಿದ್ದರು.</p>.<p>ಗಂಡಸು ಮಾತ್ರ ಸನ್ಯಾಸ ದೀಕ್ಷೆಗೆ ಅರ್ಹನಲ್ಲ; ಮಹಿಳೆಗೂ ದೀಕ್ಷೆ ಪಡೆಯಲು ಅಧಿಕಾರವಿದೆ ಎಂದು ಸಂಪ್ರದಾಯಗಳನ್ನು ಬದಿಗಿಟ್ಟ ಪೇಜಾವರ ಯತಿಗಳು ಕೃಷ್ಣನಾಮ ಮಂತ್ರ ಜಪಿಸಿ ವೈಷ್ಣವ ದೀಕ್ಷೆ ನೀಡಿದ್ದರು. ದೀಕ್ಷೆ ನಂತರ ಗುರು ಶಿಷ್ಯೆಯ ಬಾಂಧವ್ಯ ಚೆನ್ನಾಗಿತ್ತು.</p>.<p>2003ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಯ ಹುದ್ದೆ ಒಲಿದಾಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪೇಜಾವರ ಶ್ರೀಗಳಿಗೆ ಆಹ್ವಾನವಿತ್ತರು. ವಿಶೇಷ ವಿಮಾನವನ್ನೇ ಕಳುಹಿಸಿ ಶ್ರೀಗಳನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದರು. ಶ್ರೀಗಳಿಗೆ ಕೆಂಪು ಹಾಸಿನ ಭವ್ಯ ಸ್ವಾಗತ ಕೋರಿ, ವಿಶೇಷವಾಗಿ ಸತ್ಕರಿಸಿದ್ದರು.</p>.<p>ಪೇಜಾವರ ಶ್ರೀಗಳ ಆರೋಗ್ಯ ಹದಗೆಟ್ಟ ವಿಚಾರ ತಿಳಿಯುತ್ತಿದ್ದಂತೆ ಉಮಾ ಭಾರತಿ ಉಡುಪಿಗೆ ದೌಡಾಯಿಸಿದರು. ಎಡಗಾಲಿನ ಮೂಳೆ ಮುರಿದಿದ್ದರೂ ಗಾಲಿ ಖುರ್ಚಿಯಲ್ಲಿಯೇ ಆಸ್ಪತ್ರೆಗೆ ಬಂದು, ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಉಡುಪಿಯಲ್ಲಿ ತಂಗಿದ್ದ 7 ದಿನವೂ ಪ್ರತಿದಿನ ತಪ್ಪದೆ ಆಸ್ಪತ್ರೆಗೆ ಬಂದು ವೈದ್ಯರ ಬಳಿ ಮಾಹಿತಿ ಪಡೆಯುತ್ತಿದ್ದರು.</p>.<p>ಶ್ರೀಗಳು ಗುರುಮಾತ್ರವಲ್ಲ; ತಂದೆಯ ಸಮಾನರು. ಅವರು ಗುಣಮುಖರಾಗುವವರೆಗೂ ತೆರೆಳುವುದಿಲ್ಲ ಎಂದು ಸಂಕಲ್ಪ ಮಾಡಿದ್ದರು. ಕೊನೆಗೂ ಅವರ ಸಂಕಲ್ಪ ಈಡೇರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರಿಗೆ ನ.17, 1992ರಲ್ಲಿ ಸ್ವತಃ ಪೇಜಾವರ ಶ್ರೀಗಳೇ ಸನ್ಯಾಸ ದೀಕ್ಷೆ ನೀಡಿದ್ದರು. ಅಂದಿನಿಂದ ಗುರು ಹಾಗೂ ಶಿಷ್ಯೆಯರ ಬಾಂಧವ್ಯ ಗಟ್ಟಿಯಾಗಿತ್ತು.</p>.<p>ಉಮಾ ಭಾರತಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದರೂ ಗುರು ಹಾಕಿದ ಗೆರೆಯನ್ನು ಕೊನೆಯವರೆಗೂ ದಾಟಲಿಲ್ಲ. ಗುರುಪೂರ್ಣಿಯಮೆ ದಿನ ಗುರುವಂದನೆ ಸಲ್ಲಿಸುವುದನ್ನೂ ಮರೆತಿರಲಿಲ್ಲ.</p>.<p>1992ರಲ್ಲಿ ಸನ್ಯಾಸ ದೀಕ್ಷೆ ನಿರ್ಧಾರ ಮಾಡಿದ ಉಮಾ ಭಾರತಿ ನೇರವಾಗಿ ಬಂದಿದ್ದು ಉಡುಪಿಗೆ. ಪೇಜಾವರ ಶ್ರೀಗಳ ಮುಂದೆ ನಿಂತು, ಎಲ್ಲ ಬಂಧನಗಳಿಂದ ಮುಕ್ತವಾಗಬೇಕಿದೆ, ಸನ್ಯಾಸ ದೀಕ್ಷೆ ಕೊಡಿ ಎಂದು ದೈನ್ಯದಿಂದ ಬೇಡಿಕೊಂಡಿದ್ದರು.</p>.<p>ಗಂಡಸು ಮಾತ್ರ ಸನ್ಯಾಸ ದೀಕ್ಷೆಗೆ ಅರ್ಹನಲ್ಲ; ಮಹಿಳೆಗೂ ದೀಕ್ಷೆ ಪಡೆಯಲು ಅಧಿಕಾರವಿದೆ ಎಂದು ಸಂಪ್ರದಾಯಗಳನ್ನು ಬದಿಗಿಟ್ಟ ಪೇಜಾವರ ಯತಿಗಳು ಕೃಷ್ಣನಾಮ ಮಂತ್ರ ಜಪಿಸಿ ವೈಷ್ಣವ ದೀಕ್ಷೆ ನೀಡಿದ್ದರು. ದೀಕ್ಷೆ ನಂತರ ಗುರು ಶಿಷ್ಯೆಯ ಬಾಂಧವ್ಯ ಚೆನ್ನಾಗಿತ್ತು.</p>.<p>2003ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಯ ಹುದ್ದೆ ಒಲಿದಾಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪೇಜಾವರ ಶ್ರೀಗಳಿಗೆ ಆಹ್ವಾನವಿತ್ತರು. ವಿಶೇಷ ವಿಮಾನವನ್ನೇ ಕಳುಹಿಸಿ ಶ್ರೀಗಳನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದರು. ಶ್ರೀಗಳಿಗೆ ಕೆಂಪು ಹಾಸಿನ ಭವ್ಯ ಸ್ವಾಗತ ಕೋರಿ, ವಿಶೇಷವಾಗಿ ಸತ್ಕರಿಸಿದ್ದರು.</p>.<p>ಪೇಜಾವರ ಶ್ರೀಗಳ ಆರೋಗ್ಯ ಹದಗೆಟ್ಟ ವಿಚಾರ ತಿಳಿಯುತ್ತಿದ್ದಂತೆ ಉಮಾ ಭಾರತಿ ಉಡುಪಿಗೆ ದೌಡಾಯಿಸಿದರು. ಎಡಗಾಲಿನ ಮೂಳೆ ಮುರಿದಿದ್ದರೂ ಗಾಲಿ ಖುರ್ಚಿಯಲ್ಲಿಯೇ ಆಸ್ಪತ್ರೆಗೆ ಬಂದು, ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಉಡುಪಿಯಲ್ಲಿ ತಂಗಿದ್ದ 7 ದಿನವೂ ಪ್ರತಿದಿನ ತಪ್ಪದೆ ಆಸ್ಪತ್ರೆಗೆ ಬಂದು ವೈದ್ಯರ ಬಳಿ ಮಾಹಿತಿ ಪಡೆಯುತ್ತಿದ್ದರು.</p>.<p>ಶ್ರೀಗಳು ಗುರುಮಾತ್ರವಲ್ಲ; ತಂದೆಯ ಸಮಾನರು. ಅವರು ಗುಣಮುಖರಾಗುವವರೆಗೂ ತೆರೆಳುವುದಿಲ್ಲ ಎಂದು ಸಂಕಲ್ಪ ಮಾಡಿದ್ದರು. ಕೊನೆಗೂ ಅವರ ಸಂಕಲ್ಪ ಈಡೇರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>