ರಮೇಶ್ ಮಾತನಾಡಿ, ‘ಮೌಲ್ಯಮಾಪನದ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಕೆಪಿಎಸ್ಸಿ, ಹೊರಗುತ್ತಿಗೆ ಮೂಲಕ ಮೌಲ್ಯಮಾಪನ ನೆರವೇರಿಸಲಾಗಿದೆ ಎಂದು ಉತ್ತರಿಸಿದೆ. ಖಾಸಗಿ ಸಂಸ್ಥೆಯೊಂದು ಮಾಡಿದ ಮೌಲ್ಯಮಾಪನ ಆಧರಿಸಿ ಕೆಪಿಎಸ್ಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸರ್ಕಾರಿ ಸೇವೆಗೆ ನೇಮಿಸುವುದು ಎಷ್ಟು ಸರಿ. ಇನ್ನೊಂದು ಪ್ರಶ್ನೆಗೆ ಮೌಲ್ಯಮಾಪನವು ಸೂಕ್ಷ್ಮ, ಗೌಪ್ಯ ವಿಷಯ ಎಂದೂ ಹೇಳಿದೆ. ಆ ಮೂಲಕ ಗೊಂದಲ ಉಂಟು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.