<figcaption>""</figcaption>.<p><strong>ವಿಜಯಪುರ: </strong>ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ(ಅಕ್ವಾಡಕ್ಟ್)ಯನ್ನು ಶಾಸಕ ಎಂ.ಬಿ.ಪಾಟೀಲ ಲೋಕಾರ್ಪಣೆ ಮಾಡಿದರು.</p>.<p>ತಾಲ್ಲೂಕಿನ ಬುರಾಣಪುರ ಗೋದಾಮು ಬಳಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಲೆಗೆ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, 14.73 ಕಿ.ಮೀ.ಉದ್ದನೆಯ ಈ ಮೇಲ್ಸೇತುವೆ ಕಾಲುವೆಯನ್ನು ₹ 280.26 ಕೋಟಿ ವೆಚ್ಚದಲ್ಲಿ ಎರಡು ವರ್ಷದಲ್ಲಿ ನಿರ್ಮಿಸಲಾಗಿದೆ ಎಂದರು.</p>.<p>ಈ ಕಾಲುವೆಯಿಂದ ವಿಜಯಪುರ ಮತ್ತು ಇಂಡಿ ತಾಲ್ಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವಾಗಲಿದೆ ಹಾಗೂ 25 ಕೆರೆಗಳು ಭರ್ತಿಯಾಗಲಿವೆ ಎಂದು ಹೇಳಿದರು.</p>.<p class="Subhead"><strong>ದೇಶಕ್ಕೆ ಮಾದರಿ:</strong>ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ತಿಡಗುಂದಿ ಕಾಲುವೆ ಜಲಸೇತುವೆಯು ದೇಶಕ್ಕೆ ಮಾದರಿಯಾಗಿದೆ. ಈ ಕಾಲುವೆ ನಿರ್ಮಾಣದಿಂದಾಗಿ ಕೃಷ್ಣೆಯ ನೀರು ರಾಜ್ಯದ ಗಡಿಯವರೆಗೂ ತಲುಪಿದಂತಾಗಿದೆ. ಯೋಜನೆಯ ರೂವಾರಿ ಎಂ.ಬಿ.ಪಾಟೀಲಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.</p>.<p>ಆಲಮಟ್ಟಿ ಜಲಾಶಯದಿಂದ ವಿಜಯಪುರ ಜಿಲ್ಲೆಯ ಪಾಲಿನ ನೀರು ಬಳಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದು ಹೇಳಿದರು.</p>.<p class="Subhead"><strong>ಜಲಸೇತುವೆಯಲ್ಲಿ ವಾಹನ ಸಂಚಾರ:</strong>ತಾಲ್ಲೂಕಿನ ಬುರಾಣಪುರ ಗೋದಾಮಿನ ಬಳಿಯಿಂದ ಆರಂಭಗೊಂಡು ಭೂತನಾಳ ವರೆಗೂ ನೆಲಮಟ್ಟದಿಂದ ಸರಾಸರಿ 30 ಮೀಟರ್ ಎತ್ತರದಲ್ಲಿ ತಲೆ ಎತ್ತಿ ನಿಂತಿರುವ ನಾಲೆಯ ಜಲ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೂ ಅವಕಾಶವಿರುವುದು ವಿಶೇಷವಾಗಿದೆ.</p>.<p>ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಪ್ರೊ.ರಾಜು ಅಲಗೂರ, ವಿಠಲ ಕಟಕದೋಂಡ ಮತ್ತು ಡಾ.ಮಹಾಂತೇಶ ಬಿರಾದಾರ, ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ರೈತರು ಇದ್ದರು.</p>.<div style="text-align:center"><figcaption><strong>ವಿಜಯಪುರ ಜಿಲ್ಲೆಯ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ವಿಜಯಪುರ: </strong>ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ(ಅಕ್ವಾಡಕ್ಟ್)ಯನ್ನು ಶಾಸಕ ಎಂ.ಬಿ.ಪಾಟೀಲ ಲೋಕಾರ್ಪಣೆ ಮಾಡಿದರು.</p>.<p>ತಾಲ್ಲೂಕಿನ ಬುರಾಣಪುರ ಗೋದಾಮು ಬಳಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಲೆಗೆ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, 14.73 ಕಿ.ಮೀ.ಉದ್ದನೆಯ ಈ ಮೇಲ್ಸೇತುವೆ ಕಾಲುವೆಯನ್ನು ₹ 280.26 ಕೋಟಿ ವೆಚ್ಚದಲ್ಲಿ ಎರಡು ವರ್ಷದಲ್ಲಿ ನಿರ್ಮಿಸಲಾಗಿದೆ ಎಂದರು.</p>.<p>ಈ ಕಾಲುವೆಯಿಂದ ವಿಜಯಪುರ ಮತ್ತು ಇಂಡಿ ತಾಲ್ಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವಾಗಲಿದೆ ಹಾಗೂ 25 ಕೆರೆಗಳು ಭರ್ತಿಯಾಗಲಿವೆ ಎಂದು ಹೇಳಿದರು.</p>.<p class="Subhead"><strong>ದೇಶಕ್ಕೆ ಮಾದರಿ:</strong>ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ತಿಡಗುಂದಿ ಕಾಲುವೆ ಜಲಸೇತುವೆಯು ದೇಶಕ್ಕೆ ಮಾದರಿಯಾಗಿದೆ. ಈ ಕಾಲುವೆ ನಿರ್ಮಾಣದಿಂದಾಗಿ ಕೃಷ್ಣೆಯ ನೀರು ರಾಜ್ಯದ ಗಡಿಯವರೆಗೂ ತಲುಪಿದಂತಾಗಿದೆ. ಯೋಜನೆಯ ರೂವಾರಿ ಎಂ.ಬಿ.ಪಾಟೀಲಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.</p>.<p>ಆಲಮಟ್ಟಿ ಜಲಾಶಯದಿಂದ ವಿಜಯಪುರ ಜಿಲ್ಲೆಯ ಪಾಲಿನ ನೀರು ಬಳಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದು ಹೇಳಿದರು.</p>.<p class="Subhead"><strong>ಜಲಸೇತುವೆಯಲ್ಲಿ ವಾಹನ ಸಂಚಾರ:</strong>ತಾಲ್ಲೂಕಿನ ಬುರಾಣಪುರ ಗೋದಾಮಿನ ಬಳಿಯಿಂದ ಆರಂಭಗೊಂಡು ಭೂತನಾಳ ವರೆಗೂ ನೆಲಮಟ್ಟದಿಂದ ಸರಾಸರಿ 30 ಮೀಟರ್ ಎತ್ತರದಲ್ಲಿ ತಲೆ ಎತ್ತಿ ನಿಂತಿರುವ ನಾಲೆಯ ಜಲ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೂ ಅವಕಾಶವಿರುವುದು ವಿಶೇಷವಾಗಿದೆ.</p>.<p>ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಪ್ರೊ.ರಾಜು ಅಲಗೂರ, ವಿಠಲ ಕಟಕದೋಂಡ ಮತ್ತು ಡಾ.ಮಹಾಂತೇಶ ಬಿರಾದಾರ, ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ರೈತರು ಇದ್ದರು.</p>.<div style="text-align:center"><figcaption><strong>ವಿಜಯಪುರ ಜಿಲ್ಲೆಯ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>