ಮದ್ಯಪಾನ ನಿಷೇಧ; ಜನತಾ ಚಳವಳಿ ಆಗಬೇಕು: ವೀರೇಂದ್ರ ಹೆಗ್ಗಡೆ

ಉಜಿರೆ: ‘ಎಲ್ಲರೂ ಮದ್ಯ ವ್ಯಸನದಿಂದ ಮುಕ್ತರಾದಾಗ ಆರೋಗ್ಯ ಭಾಗ್ಯದ ಜೊತೆಗೆ, ಶಾಂತಿ, ನೆಮ್ಮದಿಯೊಂದಿಗೆ ಕೌಟುಂಬಿಕ ಜೀವನ ನಡೆಸಬಹುದು. ರಾಷ್ಟ್ರ ಮಟ್ಟದಲ್ಲಿ ಸರ್ಕಾರ ಮದ್ಯಪಾನ ನಿಷೇಧಿಸಬೇಕು‘ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.
‘ಲಾಕ್ಡೌನ್ ಪರಿಣಾಮ 40 ದಿನಗಳಿಂದ ಮದ್ಯ ಸೇವನೆ ತ್ಯಜಿಸಿದ್ದ ಎಲ್ಲರೂ ಶಾಶ್ವತವಾಗಿ ಮದ್ಯ ತ್ಯಜಿಸಬೇಕು. ಸಾರ್ಥಕ ಜೀವನ ನಡೆಸಬೇಕು. ಇದರಿಂದ ಉಳಿತಾಯವೂ ಹೆಚ್ಚುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಎಲ್ಲಾ ಮಹಿಳೆಯರು ಮದ್ಯಪಾನ ನಿಷೇಧ ಜನತಾ ಚಳವಳಿಯಾಗಿ ರೂಪಿಸಬೇಕು. ಮದ್ಯ ಖರೀದಿಯನ್ನು ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.