ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುವರ್ಧನ್‌ 10ನೇ ಪುಣ್ಯ ಸ್ಮರಣೆ: ದಾದಾರನ್ನು ನೆನೆದ ಅಭಿಮಾನಿಗಳು

Last Updated 30 ಡಿಸೆಂಬರ್ 2019, 5:43 IST
ಅಕ್ಷರ ಗಾತ್ರ

ಬೆಂಗಳೂರು: ನಟ ಡಾ.ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಇಂದಿಗೆ ಹತ್ತು ವರ್ಷ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಚಿತ್ರರಂಗದ ಕಲಾವಿದರು ಅವರನ್ನು ಸ್ಮರಿಸಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

ವಿಷ್ಣು ಅಭಿಮಾನಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದು, ನಿಮ್ಮನ್ನು ನಾವು ಸ್ಮರಣೆ ಮಾಡಬೇಕಾಗಿಲ್ಲ. ಮರೆತವರನ್ನು ಮಾತ್ರ ಸ್ಮರಣೆ ಮಾಡಬೇಕಾಗುತ್ತದೆ. ನೀವು ಯಾವತ್ತೂ ನಮ್ಮ ನೆನಪಿನಿಂದ ಮರೆಯಾಗಲ್ಲ. ನೀವು ಹಚ್ಚಿದ ದೀಪದ ಬೆಳಕಿನಲ್ಲಿ ನಾವು, ಚಿತ್ರರಂಗ ನಡೆಯುತ್ತಿದೆ ಎಂದು ಸಂದೇಶ ಬರೆದುಕೊಂಡಿದ್ದಾರೆ.

‘ಡಾ. ರಾಜ್‌ಕುಮಾರ್‌ ಅವರಿಗೆ ರಾಜ್‌ಕುಮಾರ್‌ ಅವರೇ ಸಾಟಿ. ಆದರೆ, ನಾನು ಚಿಕ್ಕಂದಿನಿಂದಲೂ ಬೇರೆ ಎಲ್ಲರಿಗಿಂತಲೂ ವಿಷ್ಣುವರ್ಧನ್‌ ಅವರನ್ನು ಹೆಚ್ಚು ಇಷ್ಟಪಟ್ಟೆ. ಇದಕ್ಕೆ ಕಾರಣ ಮಧ್ಯಮ ವರ್ಗದವರ ಮೇಲೆ ಪ್ರಭಾವ ಬೀರುತ್ತಿದ್ದ ಅವರ ಸಿನಿಮಾಗಳೇ ಇರಬಹುದು. ಸಾಹಸಸಿಂಹ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ. ಮತ್ತೆ ಹುಟ್ಟಿ ಬನ್ನಿ ದಾದ!’ ಎಂದು ಸಾಫ್ಟ್‌ವೇರ್ ಉದ್ಯೋಗಿ ಮಲ್ಲಿಕಾರ್ಜುನ್‌ ಎನ್ನುವವರು ಟ್ವೀಟ್ ಮಾಡಿದ್ದಾರೆ.

‘ಸಾಹಸ ಸಿಂಹ ಅಭಿನವ ಭಾರ್ಗವ ಎಂದೂ ಮರೆಯದ ಮಾಣಿಕ್ಯ ಡಾ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಇಂದಿಗೆ ಹತ್ತು ವರ್ಷಗಳು ನಿಮ್ಮ ನೆನಪು ಸದಾ ಕಾಡುತ್ತಿದೆ ಮಿಸ್ ಯು & ಲವ್ ಯು ದಾದಾ’ ಎಂದು ಅನೂಪ್‌ ಎನ್ನುವವರು ಟ್ವೀಟ್‌ನಲ್ಲಿ ಸ್ಮರಿಸಿದ್ದಾರೆ.

ವಿಷ್ಣು ದಾದಾ ಅವರನ್ನು ನೆನಪಿಸಿ ಅನೇಕರು ಟ್ವೀಟ್‌ ಮಾಡಿದ್ದು, ಫೇಸ್‌ಬುಕ್‌ ಫೋಸ್ಟ್‌ಗಳನ್ನು ಮಾಡಿದ್ದು, ಅವರ ಮೇಲಿ ಪ್ರೀತಿಯನ್ನು ಕವಿತೆಗಳ ಮೂಲಕ, ನೆನಪುಗಳ ಮೂಲಕ ಹಂಚಿಕೊಂಡಿದ್ದಾರೆ. ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT