1950ರ ದಶಕದಿಂದ ಈಚೆಗೆ ಸುದೀರ್ಘ ಕಾಲ ಕಾರ್ಮಿಕ ಹೋರಾಟಗಳನ್ನು ಮುನ್ನಡೆಸಿದ್ದ ಜಾರ್ಜ್, ಮುಂಬೈ ಮಹಾನಗರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಆ ಬಳಿಕ ಬಿಹಾರ, ಪಶ್ಚಿಮ ಬಂಗಾಳದವರೆಗೆ ಅದನ್ನು ವಿಸ್ತರಿಸಿಕೊಂಡಿದ್ದರು. ಸುದೀರ್ಘ ಕಾಲ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರೂ, ಅವರು ಮಂಗಳೂರಿನ ನೆಲದಲ್ಲಿ ಒಮ್ಮೆಯೂ ಚುನಾವಣೆ ಎದುರಿಸಿದವರಲ್ಲ. ಮುಂಬೈ ಮತ್ತು ಬಿಹಾರದಿಂದಲೇ ಆಯ್ಕೆಯಾಗಿದ್ದರು.