<p><strong>ವಾಷಿಂಗ್ಟನ್</strong> : ಭಾರತದ ವಿರುದ್ಧ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಶಮನಗೊಳಿಸಲು ಅಮೆರಿಕದ ಕಾಂಗ್ರೆಸ್ನ 9 ಮಂದಿ ಸದಸ್ಯರು ಕೆಳಮನೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದ್ದಾರೆ.</p>.<p>ಭಾರತ– ಚೀನಾ ಗಡಿಯಲ್ಲಿ ಉಲ್ಬಣಗೊಂಡಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗಗಳನ್ನುಬೀಜಿಂಗ್ ಅನುಸರಿಸಬೇಕೇ ಹೊರತು ಬಲ ಪ್ರದರ್ಶನವಲ್ಲ ಎಂದು ಸದಸ್ಯರು ಹೇಳಿದ್ದಾರೆ.</p>.<p>ಸಂಸದರ ನೇತೃತ್ವವನ್ನು ಭಾರತೀಯ ಮೂಲದ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ವಹಿಸಿದ್ದು, ರೋ ಖನ್ನಾ, ಫ್ರಾಂಕ್ ಪಲ್ಲೊನೆ, ಟಾಮ್ ಸೌಜೀ, ಟೆಡ್ ಯಾಹೊ, ಜಾರ್ಜ್ ಹೋಲ್ಡಿಂಗ್, ಶೀಲಾ ಜಾಕ್ಸನ್ ಲೀ, ಹ್ಯಾಲೇ ಸ್ಟೀವನ್ಸ್ ಮತ್ತು ಸ್ಟೀವ್ ಶಬ್ಬೊಟ್ನಿರ್ಣಯಕ್ಕೆ ಸಹಿ ಮಾಡಿದ್ದಾರೆ. </p>.<p>‘ಪೂರ್ವ ಲಡಾಖ್ನ ವಾಸ್ತವ ಗಡಿರೇಖೆಯಲ್ಲಿ (ಎಲ್ಎಸಿ) ಭಾರತ ಮತ್ತು ಚೀನಾ ಪಡೆಗಳು ಮುಖಾಮುಖಿಯಾಗಿದ್ದವು. ಮೇ 5ರಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಭಾರತ 20 ಸೈನಿಕರನ್ನೂ ಕಳೆದುಕೊಂಡಿತ್ತು. ಜೂನ್ 15ರವರೆಗೆ ಚೀನಾ ತನ್ನ 5 ಸಾವಿರ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಿತ್ತಲ್ಲದೇ ಆಕ್ರಮಣಕಾರಿಯಾಗಿ ವರ್ತಿಸಿತ್ತು. ಗಡಿಯನ್ನು ಪುನರ್ರಚಿಸಲು ಯತ್ನಿಸಿತ್ತು’ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.</p>.<p>ಭಾರತ ಗಡಿಯಷ್ಟೇ ಅಲ್ಲದೆ, ಭೂತಾನ್, ದಕ್ಷಿಣ ಚೀನಾ ಸಮುದ್ರ, ಸೆಕ್ಕಾಕು ದ್ವೀಪಗಳು, ಹಾಂಗ್ಕಾಂಗ್ ಮತ್ತು ತೈವಾನ್ ವಿರುದ್ಧ ಚೀನಾ ತಳೆದಿರುವ ನಿಲುವಿನ ಬಗ್ಗೆಯೂ ನಿರ್ಣಯವು ದೃಷ್ಟಿಹರಿಸಿದೆ ಎನ್ನಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್</strong> : ಭಾರತದ ವಿರುದ್ಧ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಶಮನಗೊಳಿಸಲು ಅಮೆರಿಕದ ಕಾಂಗ್ರೆಸ್ನ 9 ಮಂದಿ ಸದಸ್ಯರು ಕೆಳಮನೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದ್ದಾರೆ.</p>.<p>ಭಾರತ– ಚೀನಾ ಗಡಿಯಲ್ಲಿ ಉಲ್ಬಣಗೊಂಡಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗಗಳನ್ನುಬೀಜಿಂಗ್ ಅನುಸರಿಸಬೇಕೇ ಹೊರತು ಬಲ ಪ್ರದರ್ಶನವಲ್ಲ ಎಂದು ಸದಸ್ಯರು ಹೇಳಿದ್ದಾರೆ.</p>.<p>ಸಂಸದರ ನೇತೃತ್ವವನ್ನು ಭಾರತೀಯ ಮೂಲದ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ವಹಿಸಿದ್ದು, ರೋ ಖನ್ನಾ, ಫ್ರಾಂಕ್ ಪಲ್ಲೊನೆ, ಟಾಮ್ ಸೌಜೀ, ಟೆಡ್ ಯಾಹೊ, ಜಾರ್ಜ್ ಹೋಲ್ಡಿಂಗ್, ಶೀಲಾ ಜಾಕ್ಸನ್ ಲೀ, ಹ್ಯಾಲೇ ಸ್ಟೀವನ್ಸ್ ಮತ್ತು ಸ್ಟೀವ್ ಶಬ್ಬೊಟ್ನಿರ್ಣಯಕ್ಕೆ ಸಹಿ ಮಾಡಿದ್ದಾರೆ. </p>.<p>‘ಪೂರ್ವ ಲಡಾಖ್ನ ವಾಸ್ತವ ಗಡಿರೇಖೆಯಲ್ಲಿ (ಎಲ್ಎಸಿ) ಭಾರತ ಮತ್ತು ಚೀನಾ ಪಡೆಗಳು ಮುಖಾಮುಖಿಯಾಗಿದ್ದವು. ಮೇ 5ರಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಭಾರತ 20 ಸೈನಿಕರನ್ನೂ ಕಳೆದುಕೊಂಡಿತ್ತು. ಜೂನ್ 15ರವರೆಗೆ ಚೀನಾ ತನ್ನ 5 ಸಾವಿರ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಿತ್ತಲ್ಲದೇ ಆಕ್ರಮಣಕಾರಿಯಾಗಿ ವರ್ತಿಸಿತ್ತು. ಗಡಿಯನ್ನು ಪುನರ್ರಚಿಸಲು ಯತ್ನಿಸಿತ್ತು’ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.</p>.<p>ಭಾರತ ಗಡಿಯಷ್ಟೇ ಅಲ್ಲದೆ, ಭೂತಾನ್, ದಕ್ಷಿಣ ಚೀನಾ ಸಮುದ್ರ, ಸೆಕ್ಕಾಕು ದ್ವೀಪಗಳು, ಹಾಂಗ್ಕಾಂಗ್ ಮತ್ತು ತೈವಾನ್ ವಿರುದ್ಧ ಚೀನಾ ತಳೆದಿರುವ ನಿಲುವಿನ ಬಗ್ಗೆಯೂ ನಿರ್ಣಯವು ದೃಷ್ಟಿಹರಿಸಿದೆ ಎನ್ನಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>