ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕುಲಶೇಖರ ವಿದಾಯ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 2011ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಭಾರತದ ಮಹೇಂದ್ರಸಿಂಗ್ ಧೋನಿ ಹೊಡೆದಿದ್ದ ‘ವಿಜಯದ ಸಿಕ್ಸರ್’ ಮರೆಯಲು ಸಾಧ್ಯವೇ? ಅಂದು ಆ ಎಸೆತ ಹಾಕಿದ್ದ ಶ್ರೀಲಂಕಾದ ನುವಾನ ಕುಲಶೇಖರ ಅವರು ಕಣ್ಣೀರಾಗಿದ್ದರು.
ಲಂಕಾ ಕ್ರಿಕೆಟ್ನ ಶ್ರೇಷ್ಠ ಮಧ್ಯಮವೇಗಿಗಳಲ್ಲಿ ಒಬ್ಬರಾಗಿರುವ ನುವಾನ ಕುಲಶೇಖರ ಅವರು ಬುಧವಾರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಲಂಕಾದ ಚಮಿಂದಾ ವಾಸ್ ಮತ್ತು ಲಸಿತ್ ಮಾಲಿಂಗ ಅವರ ನಂತರ ಹೆಚ್ಚು ವಿಕೆಟ್ ಗಳಿಸಿದ ಹೆಗ್ಗಳಿಕೆ ಅವರದ್ದು.Last Updated 24 ಜುಲೈ 2019, 19:43 IST