<p>‘ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮಕ್ಕಳಿಗೆ ಕೃಪಾಂಕ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿಟ್ಟಾಗಿದ್ದಾ<br>ರಂತೆ ಕಣ್ರೀ’ ಅಂದಳು ಸುಮಿ.</p><p>‘ಹೌದು, ಫಲಾನುಭವಿಗಳಿಗೆ ಸಾಲದಲ್ಲಿ ಸಬ್ಸಿಡಿ ನೀಡುವಂತೆ ಇಲಾಖೆಯು ಮಕ್ಕಳಿಗೆ ಕೃಪಾಂಕ ಕರುಣಿಸಿದೆ. ಊಟ, ಬಟ್ಟೆ, ಪುಸ್ತಕದ ಜೊತೆಗೆ ಮಕ್ಕಳಿಗೆ ಉಚಿತವಾಗಿ ಕೃಪಾಂಕ ಕೊಟ್ಟರೂ ಪರೀಕ್ಷಾ ಫಲಿತಾಂಶ ಕುಸಿದಿದೆಯಂತೆ’ ಅಂದ ಶಂಕ್ರಿ.</p><p>‘ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಮೂಲಕ ವೆಬ್ಕಾಸ್ಟಿಂಗ್ ಅಳವಡಿಸಿದ್ದು ಫಲಿತಾಂಶ ಕುಸಿಯಲು ಕಾರಣವಂತೆ’.</p><p>‘ಸಿ.ಸಿ. ಕ್ಯಾಮೆರಾ ಕೆಂಗಣ್ಣಿಗೆ ಮಕ್ಕಳು ಹೆದರಿರಬಹುದು. ಸಾಲದ್ದಕ್ಕೆ ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಕಾವಲು, ಆಗಾಗ ಸ್ಕ್ವಾಡ್ಗಳು ಬಂದು ಹೆದರಿಸಿದ್ರೆ ಮಕ್ಕಳು ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಸಾಧ್ಯವೇ?’</p><p>‘ಹೀಗೆ ಮಾಡದಿದ್ದರೆ ಪರೀಕ್ಷೆಯಲ್ಲಿ ಅಕ್ರಮ ನಡೆಯುವುದಂತೆ’.</p><p>‘ಎಲ್ಲಾ ಶಾಲೆಗಳ ಕ್ಲಾಸ್ ರೂಮ್ಗಳಿಗೆ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿ ಪಾಠಪ್ರವಚನದ ಲೋಪಗಳನ್ನು ತರಗತಿ ಹಂತದಲ್ಲೇ ಸರಿಪಡಿಸಿದ್ದರೆ ಪರೀಕ್ಷೆಗಳನ್ನು ಸರಳವಾಗಿ ಮಾಡಬಹುದಿತ್ತೇನೊ’.</p><p>‘ಹೌದು, ತರಗತಿಯಲ್ಲಿ ಯಾವ ಮಕ್ಕಳು ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ, ಇನ್ಯಾರು ಆಕಳಿಸಿ, ತೂಕಡಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಗಮನಕ್ಕೆ ಬರುತ್ತದೆ. ನಿರಾಸಕ್ತ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ತಗೊಂಡು ಅವರ ಜ್ಞಾನ ವೃದ್ಧಿಸಬಹುದು’.</p><p>‘ಬಿಸಿಯೂಟ ಉಂಡ ಶಿಕ್ಷಕರಿಗೇ ತೂಕಡಿಕೆ ಬರುತ್ತದೆ, ಮಕ್ಕಳು ತೂಕಡಿಸದೆ ಇರ್ತಾರಾ?’</p><p>‘ಹಾಗಂತ, ಊಟದ ನಂತರ ಮಕ್ಕಳು ನಿದ್ರೆ ಮಾಡಲೆಂದು ಒಂದು ಪಿರಿಯಡ್ ಮೀಸಲಿಡ<br>ಲಾಗುತ್ತಾ?’</p><p>‘ಆಗಲ್ಲ, ಶೈಕ್ಷಣಿಕ ಸಮಸ್ಯೆ ಜಾಸ್ತಿಯಾಗ್ತಿದೆ. ಅನೇಕ ಶಾಲೆಗಳಲ್ಲಿ ಒಬ್ಬರೂ ಪಾಸಾಗದೆ ಬಿಗ್ ಜೀರೊ ರಿಸಲ್ಟ್ ಬಂದಿದೆಯಂತೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’.</p><p>‘ನಿಜ, ಆಯಾ ಶಾಲೆಗಳಿಗೇ ಪರೀಕ್ಷೆ ನಡೆಸುವ ‘ಕಾಪಿರೈಟ್ಸ್’ ಕೊಟ್ಟರೆ ಎಲ್ಲ ಮಕ್ಕಳೂ ಪಾಸ್ ಆಗ್ತಾರೆ, ಇಲಾಖೆಯೂ ಪಾಸ್ ಆಗ್ತದೆ’ ಎಂದಳು ಸುಮಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮಕ್ಕಳಿಗೆ ಕೃಪಾಂಕ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿಟ್ಟಾಗಿದ್ದಾ<br>ರಂತೆ ಕಣ್ರೀ’ ಅಂದಳು ಸುಮಿ.</p><p>‘ಹೌದು, ಫಲಾನುಭವಿಗಳಿಗೆ ಸಾಲದಲ್ಲಿ ಸಬ್ಸಿಡಿ ನೀಡುವಂತೆ ಇಲಾಖೆಯು ಮಕ್ಕಳಿಗೆ ಕೃಪಾಂಕ ಕರುಣಿಸಿದೆ. ಊಟ, ಬಟ್ಟೆ, ಪುಸ್ತಕದ ಜೊತೆಗೆ ಮಕ್ಕಳಿಗೆ ಉಚಿತವಾಗಿ ಕೃಪಾಂಕ ಕೊಟ್ಟರೂ ಪರೀಕ್ಷಾ ಫಲಿತಾಂಶ ಕುಸಿದಿದೆಯಂತೆ’ ಅಂದ ಶಂಕ್ರಿ.</p><p>‘ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಮೂಲಕ ವೆಬ್ಕಾಸ್ಟಿಂಗ್ ಅಳವಡಿಸಿದ್ದು ಫಲಿತಾಂಶ ಕುಸಿಯಲು ಕಾರಣವಂತೆ’.</p><p>‘ಸಿ.ಸಿ. ಕ್ಯಾಮೆರಾ ಕೆಂಗಣ್ಣಿಗೆ ಮಕ್ಕಳು ಹೆದರಿರಬಹುದು. ಸಾಲದ್ದಕ್ಕೆ ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಕಾವಲು, ಆಗಾಗ ಸ್ಕ್ವಾಡ್ಗಳು ಬಂದು ಹೆದರಿಸಿದ್ರೆ ಮಕ್ಕಳು ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಸಾಧ್ಯವೇ?’</p><p>‘ಹೀಗೆ ಮಾಡದಿದ್ದರೆ ಪರೀಕ್ಷೆಯಲ್ಲಿ ಅಕ್ರಮ ನಡೆಯುವುದಂತೆ’.</p><p>‘ಎಲ್ಲಾ ಶಾಲೆಗಳ ಕ್ಲಾಸ್ ರೂಮ್ಗಳಿಗೆ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿ ಪಾಠಪ್ರವಚನದ ಲೋಪಗಳನ್ನು ತರಗತಿ ಹಂತದಲ್ಲೇ ಸರಿಪಡಿಸಿದ್ದರೆ ಪರೀಕ್ಷೆಗಳನ್ನು ಸರಳವಾಗಿ ಮಾಡಬಹುದಿತ್ತೇನೊ’.</p><p>‘ಹೌದು, ತರಗತಿಯಲ್ಲಿ ಯಾವ ಮಕ್ಕಳು ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ, ಇನ್ಯಾರು ಆಕಳಿಸಿ, ತೂಕಡಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಗಮನಕ್ಕೆ ಬರುತ್ತದೆ. ನಿರಾಸಕ್ತ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ತಗೊಂಡು ಅವರ ಜ್ಞಾನ ವೃದ್ಧಿಸಬಹುದು’.</p><p>‘ಬಿಸಿಯೂಟ ಉಂಡ ಶಿಕ್ಷಕರಿಗೇ ತೂಕಡಿಕೆ ಬರುತ್ತದೆ, ಮಕ್ಕಳು ತೂಕಡಿಸದೆ ಇರ್ತಾರಾ?’</p><p>‘ಹಾಗಂತ, ಊಟದ ನಂತರ ಮಕ್ಕಳು ನಿದ್ರೆ ಮಾಡಲೆಂದು ಒಂದು ಪಿರಿಯಡ್ ಮೀಸಲಿಡ<br>ಲಾಗುತ್ತಾ?’</p><p>‘ಆಗಲ್ಲ, ಶೈಕ್ಷಣಿಕ ಸಮಸ್ಯೆ ಜಾಸ್ತಿಯಾಗ್ತಿದೆ. ಅನೇಕ ಶಾಲೆಗಳಲ್ಲಿ ಒಬ್ಬರೂ ಪಾಸಾಗದೆ ಬಿಗ್ ಜೀರೊ ರಿಸಲ್ಟ್ ಬಂದಿದೆಯಂತೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’.</p><p>‘ನಿಜ, ಆಯಾ ಶಾಲೆಗಳಿಗೇ ಪರೀಕ್ಷೆ ನಡೆಸುವ ‘ಕಾಪಿರೈಟ್ಸ್’ ಕೊಟ್ಟರೆ ಎಲ್ಲ ಮಕ್ಕಳೂ ಪಾಸ್ ಆಗ್ತಾರೆ, ಇಲಾಖೆಯೂ ಪಾಸ್ ಆಗ್ತದೆ’ ಎಂದಳು ಸುಮಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>