<p><strong>ಬೆಂಗಳೂರು</strong>: ಭಾರತದ ಸಂಸ್ಕೃತಿ ಮತ್ತು ವೈವಿದ್ಯತೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿಯೇ ಬೆಂಗಳೂರಿಗೆ ತಮ್ಮ ಕಂಪನಿಯನ್ನು ಸ್ಥಳಾಂತರಿಸಿರುವ ಜಪಾನ್ ಟೆಕ್ ಕಂಪನಿ ಸಿಇಒ ಒಬ್ಬರು ‘ಜಗತ್ತಿಗೆ ಭಾರತದ ನಾಯತ್ವ ಅವಶ್ಯಕತೆಯಿದೆ’ ಎಂದು ಹೇಳಿದ್ದಾರೆ.</p><p>ಟೆಕ್ ಜಪಾನ್ ಎಂಬ ಕಂಪನಿ ಸ್ಥಾಪಕ ಹಾಗೂ ಸಿಇಒ ಆಗಿರುವ ಜಪಾನ್ ಮೂಲದ ನಾವೊಟಾಕಾ ನಿಶಿಯಾಮಾ ಎನ್ನುವರು ತಮ್ಮ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಭಾರತದ ಬೆಳವಣಿಗೆ ಬಗ್ಗೆ ಮೆಚ್ಚಿಕೊಂಡಿದ್ದಾರೆ.</p><p>ನಿಶಿಯಾಮಾ ಅವರು ಕಳೆದ ಏಪ್ರಿಲ್ನಲ್ಲಿ ಟೊಕಿಯೊದಲ್ಲಿದ್ದ ಅವರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ ಎಂದು ಮನಿ ಕಂಟ್ರೋಲ್ ವೆವ್ಸೈಟ್ ವರದಿ ಮಾಡಿದೆ.</p><p>ಜಗತ್ತು ಇಂದು ವಾಸಿಸಲು ಯೋಗ್ಯವಾಗಿಲ್ಲ. ಆದರೆ, ಅದೆಲ್ಲ ಸಮಸ್ಯೆಗಳನ್ನು ತೊಡೆದು ಭಾರತ ಜಗತ್ತನ್ನು ಮುನ್ನಡೆಸಲಿದೆ. ಇದಕ್ಕಾಗಿ ಜಗತ್ತಿಗೆ ಭಾರತದ ನಾಯಕತ್ವದ ಅವಶ್ಯಕತೆಯಿದೆ ಎಂದಿದ್ದಾರೆ. ಇದಕ್ಕಾಗಿ ಅವರು ಮೈಕ್ರೊಸಾಫ್ಟ್ ಸಿಇಒ ಸತ್ಯಾ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.</p><p>ಭಾರತವು ವಿವಿಧ ಧರ್ಮ, ಭಾಷೆ ಮತ್ತು ವಿವಿಧ ಮೌಲ್ಯಗಳನ್ನು ಹೊಂದಿದ್ದರೂ ಒಂದು ಸಮಗ್ರ ದೇಶವಾಗಿ ಬೆರಗು ಮೂಡಿಸುತ್ತದೆ ಎಂದಿದ್ದಾರೆ.</p><p>ಭಾರತದಲ್ಲಿ ಸ್ಪರ್ಧೆ ಮತ್ತು ಸಹಯೋಗ ಎರಡೂ ಇರುವುದರಿಂದ ಜಗತ್ತನ್ನು ಮುನ್ನಡೆಸಲು ಸಮರ್ಥವಾಗಿದೆ ಎಂದು ನಿಶಿಯಾಮಾ ಕೊಂಡಾಡಿದ್ದಾರೆ.</p><p>ನಿಶಿಯಾಮಾ ಅವರು ಕೆಲಸದ ಜೊತೆ ಭಾರತದ ವೈವಿದ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರವಾಸ ಮಾಡುತ್ತಾ ತಾವು ಕಂಡ ಸಂಗತಿಗಳನ್ನು ಫೇಸ್ಬುಕ್, ಲಿಂಕ್ಡಿನ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಭಾರತದ ಸಂಸ್ಕೃತಿ ಮತ್ತು ವೈವಿದ್ಯತೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿಯೇ ಬೆಂಗಳೂರಿಗೆ ತಮ್ಮ ಕಂಪನಿಯನ್ನು ಸ್ಥಳಾಂತರಿಸಿರುವ ಜಪಾನ್ ಟೆಕ್ ಕಂಪನಿ ಸಿಇಒ ಒಬ್ಬರು ‘ಜಗತ್ತಿಗೆ ಭಾರತದ ನಾಯತ್ವ ಅವಶ್ಯಕತೆಯಿದೆ’ ಎಂದು ಹೇಳಿದ್ದಾರೆ.</p><p>ಟೆಕ್ ಜಪಾನ್ ಎಂಬ ಕಂಪನಿ ಸ್ಥಾಪಕ ಹಾಗೂ ಸಿಇಒ ಆಗಿರುವ ಜಪಾನ್ ಮೂಲದ ನಾವೊಟಾಕಾ ನಿಶಿಯಾಮಾ ಎನ್ನುವರು ತಮ್ಮ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಭಾರತದ ಬೆಳವಣಿಗೆ ಬಗ್ಗೆ ಮೆಚ್ಚಿಕೊಂಡಿದ್ದಾರೆ.</p><p>ನಿಶಿಯಾಮಾ ಅವರು ಕಳೆದ ಏಪ್ರಿಲ್ನಲ್ಲಿ ಟೊಕಿಯೊದಲ್ಲಿದ್ದ ಅವರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ ಎಂದು ಮನಿ ಕಂಟ್ರೋಲ್ ವೆವ್ಸೈಟ್ ವರದಿ ಮಾಡಿದೆ.</p><p>ಜಗತ್ತು ಇಂದು ವಾಸಿಸಲು ಯೋಗ್ಯವಾಗಿಲ್ಲ. ಆದರೆ, ಅದೆಲ್ಲ ಸಮಸ್ಯೆಗಳನ್ನು ತೊಡೆದು ಭಾರತ ಜಗತ್ತನ್ನು ಮುನ್ನಡೆಸಲಿದೆ. ಇದಕ್ಕಾಗಿ ಜಗತ್ತಿಗೆ ಭಾರತದ ನಾಯಕತ್ವದ ಅವಶ್ಯಕತೆಯಿದೆ ಎಂದಿದ್ದಾರೆ. ಇದಕ್ಕಾಗಿ ಅವರು ಮೈಕ್ರೊಸಾಫ್ಟ್ ಸಿಇಒ ಸತ್ಯಾ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.</p><p>ಭಾರತವು ವಿವಿಧ ಧರ್ಮ, ಭಾಷೆ ಮತ್ತು ವಿವಿಧ ಮೌಲ್ಯಗಳನ್ನು ಹೊಂದಿದ್ದರೂ ಒಂದು ಸಮಗ್ರ ದೇಶವಾಗಿ ಬೆರಗು ಮೂಡಿಸುತ್ತದೆ ಎಂದಿದ್ದಾರೆ.</p><p>ಭಾರತದಲ್ಲಿ ಸ್ಪರ್ಧೆ ಮತ್ತು ಸಹಯೋಗ ಎರಡೂ ಇರುವುದರಿಂದ ಜಗತ್ತನ್ನು ಮುನ್ನಡೆಸಲು ಸಮರ್ಥವಾಗಿದೆ ಎಂದು ನಿಶಿಯಾಮಾ ಕೊಂಡಾಡಿದ್ದಾರೆ.</p><p>ನಿಶಿಯಾಮಾ ಅವರು ಕೆಲಸದ ಜೊತೆ ಭಾರತದ ವೈವಿದ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರವಾಸ ಮಾಡುತ್ತಾ ತಾವು ಕಂಡ ಸಂಗತಿಗಳನ್ನು ಫೇಸ್ಬುಕ್, ಲಿಂಕ್ಡಿನ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>