ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಾತು ಅತಿಯಾಯ್ತು ಎಂದು ಮಂಜ್ರೇಕರ್‌ನ್ನು ಟ್ವಿಟರ್‌ನಲ್ಲಿ ಜಾಡಿಸಿದ ಜಡೇಜಾ 

Last Updated 3 ಜುಲೈ 2019, 14:54 IST
ಅಕ್ಷರ ಗಾತ್ರ

ನವದೆಹಲಿ: ಮಂಗಳವಾರ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್, ಮಹೇಂದ್ರ ಸಿಂಗ್ ಧೋನಿಯ ಸ್ಟ್ರೈಕ್ ರೇಟ್ ಬಗ್ಗೆ ವಿಮರ್ಶಿಸಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ಟೀಕೆ ವ್ಯಕ್ತ ಪಡಿಸಿದ್ದರು.

ಮಂಜ್ರೇಕರ್ ಟೀಂ ಇಂಡಿಯಾ ವಿರುದ್ಧ ಟೀಕೆ ಮಾಡುತ್ತಾ ಬಾಂಗ್ಲಾದೇಶವೇ ಈ ಮ್ಯಾಚ್ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿರುವಂತಿದೆ ಎಂದು ಕಾಮೆಂಟರಿ ಕೇಳಿದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದರು.

ಧೋನಿ ಬಗ್ಗೆ ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ಪ್ರತಿಕ್ರಿಯಿಸಿದ್ದಲ್ಲದೆ ಇದೇ ವಿಷಯವನ್ನು ಟ್ವೀಟ್ ಮಾಡಿದ್ದಾರೆ ಸಂಜಯ್ ಮಂಜ್ರೇಕರ್.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ರವೀಂದ್ರ ಜಡೇಜಾ

ನೀವು ಆಡಿದ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯಗಳನ್ನು ನಾನು ಆಡಿದ್ದೇನೆ. ಇನ್ನೂ ಆಟ ಮುಂದುವರಿಸಿದ್ದೇನೆ, ಸಾಧಕರಿಗೆ ಗೌರವ ಕೊಡುವುದನ್ನುಕಲಿತುಕೊಳ್ಳಿ. ನಿಮ್ಮ ಅತಿಯಾದ ಮಾತುಗಳನ್ನು ನಾನು ತುಂಬಾ ಕೇಳಿದ್ದೀನಿ ಎಂದಿದ್ದಾರೆ. ಇತ್ತೀಚೆಗಷ್ಟೇ ಜಡೇಜಾ ಅವರನ್ನು ಮಂಜ್ರೇಕರ್ bits-and-pieces ಕ್ರಿಕೆಟರ್ ಎಂದು ಕರೆದಿದ್ದರು.


ಕಾಮೆಂಟರಿ ಬಗ್ಗೆ ಅಸಹನೆ ವ್ಯಕ್ತ ಪಡಿಸಿ ನೆಟ್ಟಿಗರು ಮಂಜ್ರೇಕರ್ ಅವರನ್ನು ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT