ಸಾಫ್ಟ್ವೇರ್ ಎಂಜಿನಿಯರ್ ಸಚಿನ್ ಸಂಘೆ ‘ಸೀಮೆಸುಣ್ಣ’ದಲ್ಲಿ ವಿಶ್ವೇಶತೀರ್ಥ ಶ್ರೀಗಳು ಶ್ರೀಕೃಷ್ಣನ ಕೈಹಿಡಿದು ಕೊಂಡು ಹೋಗುತ್ತಿರುವಂತಹ ಕಲಾಕೃತಿಯನ್ನು ರಚಿಸಿದ್ದಾರೆ. ಈ ಮೂಲಕ, ಶ್ರೀಗಳಿಗೆ ‘ಕಲಾ ನಮನ’ ಸಲ್ಲಿಸಿದ್ದಾರೆ. ಸುಮಾರು ಆರರಿಂದ ಏಳು ತಾಸುಗಳ ಪರಿಶ್ರಮದೊಂದಿಗೆ ಯಾವುದೇ ಲೆನ್ಸ್ ಬಳಸದೇ ಈ ಕಲಾಕೃತಿ ರಚಿಸಿದ್ದಾರೆ. ಕಲಾಕೃತಿ ರಚನೆಯನ್ನು ಕೆಳಗಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಡಬಹುದು.