ಬೆಂಗಳೂರು: ಬಹುತೇಕ ರಸ್ತೆ ಅಪಘಾತಗಳಲ್ಲಿ ಗಾಯಾಳುಗಳು ಮೃತಪಡುವುದು ತೀವ್ರ ರಕ್ತಸ್ರಾವದಿಂದ. ಗಾಯಗಳಿಂದ ಹೊರಸೂಸುವ ರಕ್ತವು ತಕ್ಷಣವೇ ಹೆಪ್ಪುಗಟ್ಟುವಂತೆ ಮಾಡುವ ಔಷಧ ಲಭ್ಯ. ಆದರೆ, ಅದನ್ನು ಸಕಾಲದಲ್ಲಿ ಗಾಯಾಳುವಿಗೆ ತಲುಪಿಸುವುದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಲು ಡ್ರೋನ್ಗಳನ್ನು ಬಳಸಲು ನಮ್ಮ ದೇಶದಲ್ಲೂ ಗಂಭೀರ ಪ್ರಯತ್ನಗಳು ನಡೆಯುತ್ತಿವೆ.