ಬೆಂಗಳೂರು: ಮಿದುಳು ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಯೊಬ್ಬರಿಗೆ ನಟ ಕಮಲ್ ಹಾಸನ್ ವಿಡಿಯೊ ಕರೆ ಮಾಡಿ ಧೈರ್ಯ ತುಂಬಿದ್ದಾರೆ.
ಕಮಲ್ ಹಾಸನ್ ನಡೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ವಿಡಿಯೊ ವೈರಲ್ ಆಗಿದೆ.
ಅನಿವಾಸಿ ಭಾರತೀಯ ಸಾಕೇತ್ಗೆ ಮಿದುಳಿನ ಕ್ಯಾನ್ಸರ್ ಮೂರನೇ ಹಂತದಲ್ಲಿದ್ದು, ಅದಕ್ಕೆ ಚಿಕಿತ್ಸೆ ನಡೆಯುತ್ತಿದೆ. ಸಾಕೇತ್ಗೆ ನೆಚ್ಚಿನ ನಟ ಕಮಲ್ ಹಾಸನ್ರನ್ನು ಭೇಟಿಯಾಗಬೇಕು ಎನ್ನುವ ಅಭಿಲಾಷೆಯಿತ್ತು. ಆದರೆ ಅದಕ್ಕೆ ಅವಕಾಶ ಲಭ್ಯವಾಗಿರಲಿಲ್ಲ.
ಈ ಮಧ್ಯೆ, ಸಂಧ್ಯಾ ವೈದ್ಯನಾಥನ್ ಎಂಬುವರು ಸಾಕೇತ್ಗೆ ಕಮಲ್ ಹಾಸನ್ ಜತೆಗೆ ಮಾತುಕತೆಗೆ ಅವಕಾಶ ಕಲ್ಪಿಸಿದ್ದಾರೆ. ಅದರಂತೆ ಸಾಕೇತ್, ಕಮಲ್ ಹಾಸನ್ ಜತೆಗೆ ವಿಡಿಯೊ ಕರೆಯ ಮೂಲಕ ಮಾತನಾಡಿದ್ದಾರೆ.
ಸಂಧ್ಯಾ ಈ ಕುರಿತ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಯ ಕಥೆ ಕೇಳಿದ ಕಮಲ್ ಹಾಸನ್ ಕೂಡ ಕಣ್ಣಂಚಿನಲ್ಲಿ ನೀರು ಜಿನುಗಿದೆ. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.