ಯುವ ಗಾಯಕನ ಹಾಡಿಗೆರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಯಕ ಪಾರ್ಥ್ ಅವರು ವಸುಂಧರಾ ರಾಜೆ ಅವರ ಮುಂದೆ ಕೇಸರಿ ಚಿತ್ರದ ‘ತೇರಿ ಮಿಟ್ಟಿ‘ ಹಾಡನ್ನು ಹಾಡಿದ್ದಾರೆ.ಈವಿಡಿಯೊ ತುಣುಕನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ರಾಜೆ, ಪಾರ್ಥ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
‘ರಾಜಸ್ಥಾನದ ಸುಜನ್ಗಢ್ನ ಯುವಗಾಯಕ ಪಾರ್ಥ್ಅವರನ್ನು ಭೇಟಿಯಾಗಿ ಸಂತಸಗೊಂಡಿದ್ದೇನೆ.ಅವರು ನಮ್ಮ ಮುಂದೆ‘ತೇರಿ ಮಿಟ್ಟಿ‘ ಹಾಡನ್ನುಅದ್ಭುತವಾಗಿ ಹಾಡಿದರು.ಅದನ್ನು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನಿಮಗೆ(ಪಾರ್ಥ್) ಶುಭವಾಗಲಿ‘ ಎಂದು ಬರೆದುಕೊಂಡಿದ್ದಾರೆ.