<p>`ಮುಕ್ಕಾಲು ಅಡಿ ದಂಡೆ ಹೂವಿಗೆ ರೂ10-15. ಸೀಸನ್ನಲ್ಲಿ ಮಾರಾಟ ಬೆಲೆ ರೂ 75 - 100. ಬೆಳೆಯೋದು ಒಂದೂವರೆ ಎಕರೆಗಿಂತ ಕಡಿಮೆ, ಅರ್ಧ ಎಕರೆಗಿಂತ ಹೆಚ್ಚು. <br /> <br /> ಬೆಳೆಗಾರರೆಲ್ಲ ಗುತ್ತಿಗೆ ರೈತರು. ವರ್ಷಕ್ಕೆ ಕನಿಷ್ಠ ಮೂರು ಹಂತಗಳಲ್ಲಿ ಈ ಹೂವಿನ ವ್ಯಾಪಾರ ಮಾಡುತ್ತಾರೆ. ಅಲ್ಪ ಕಾಲದಲ್ಲಿ ಒಂದಷ್ಟು ಹಣ ಗಳಿಸುತ್ತಾರೆ. ಇಡೀ ಕುಟುಂಬ ಸದಸ್ಯರೇ ಈ ಹೂವಿನ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ~<br /> <br /> ಇದು ರುದ್ರಾಕ್ಷಿ ಹೂವಿನ ವ್ಯಾಪಾರದ ಕಥೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಅರಳುವ ರುದ್ರಾಕ್ಷಿ ಹೂವು ಅಂದವಾಗಿದ್ದು, ಅಲಂಕಾರಕ್ಕೆ ಮೆರುಗು ನೀಡುತ್ತದೆ. ಬಾಳಿಕೆಯಲ್ಲಿ ಗ್ರಾಹಕ ಸ್ನೇಹಿ. ಹಾಗಾಗಿಯೇ ಈ ಹೂವಿಗೆ ಹಬ್ಬ-ಹರಿದಿನಗಳಲ್ಲಿ ಭಾರಿ ಬೇಡಿಕೆ. <br /> <br /> `ರುದ್ರಾಕ್ಷಿ~ ಆಕಾರವಿರುವುದರಿಂದ ಹೂವಿಗೆ ಆ ಹೆಸರು. ರಾಜ್ಯದ ವಿವಿಧೆಡೆ ಅನಂತ ಗೊಂಡೆ, ಗೊಂಡೆ, ಬೇಲಿ ಹೂವು.. ಎಂದು ಕರೆಯುತ್ತಾರೆ. ಕನಕಪುರ ತಾಲ್ಲೂಕಿನಲ್ಲಿ ಈ ಹೂವನ್ನು ವಾಣಿಜ್ಯ ಉದ್ದೇಶದಿಂದ ಬೆಳೆಯುತ್ತಾರೆ.<br /> <br /> <strong>ಹಬ್ಬದಲ್ಲಿ ಭಾರಿ ಬೇಡಿಕೆ</strong><br /> ವರಮಹಾಲಕ್ಷ್ಮಿ, ಗೌರಿ - ಗಣೇಶ ಹಬ್ಬದ ಸಮಯದಲ್ಲಿ ಹೂವಿನ ವಹಿವಾಟು ಜೋರು. ವಾರವಿಟ್ಟರೂ ಬಾಡದ ಈ ಹೂವನ್ನು ಮದುವೆ, ಮುಂಜಿಯಂತಹ ಶುಭ ಸಮಾರಂಭಗಳಲ್ಲಿ ವೇದಿಕೆ ಅಲಂಕಾರಕ್ಕೆ, ನಾಮಫಲಕಗಳ ಅಕ್ಷರ ಬಿಡಿಸಲು ಬಳಸುತ್ತಾರೆ. ಅಂಥ ದಿನಗಳಲ್ಲಿ ಬೆಳೆಗಾರರಿಗೆ ಪುರುಸೊತ್ತಿಲ್ಲದಷ್ಟು ಕೆಲಸ !<br /> <br /> ಕನಕಪುರ ತಾಲ್ಲೂಕಿನ ಹಾರೋಹಳ್ಳಿ - ಬಿಡದಿ ರಸ್ತೆಯಲ್ಲಿ ಆಸು-ಪಾಸಿನ ಹಳ್ಳಿಗಳಾದ ಕೋಡಹಳ್ಳಿ, ಸಿದ್ದಾಪುರ, ಕೆಂಚಪ್ಪನ ದೊಡ್ಡಿ, ಬೈರಮಂಗಲ ಹಾಗೂ ಕೆಲವು ಹಳ್ಳಿಗಳಲ್ಲಿ ರುದ್ರಾಕ್ಷಿ ಹೂವನ್ನು ಹೆಚ್ಚಾಗಿ ಬೆಳೆಯುತ್ತಾರೆ. `ಸಿದ್ದಾಪುರ, ಗಾಣಾಳುದೊಡ್ಡಿ ವ್ಯಾಪ್ತಿಯಲ್ಲಿ 50 ಎಕರೆ ಪ್ರದೇಶದಲ್ಲಿ ರುದ್ರಾಕ್ಷಿ ಹೂವು ಬೆಳೆಯಿರಿ~ ಎನ್ನುವುದು ಪುಷ್ಪ ಕೃಷಿಕ ಕೃಷ್ಣಮೂರ್ತಿ ಅವರ ಅಭಿಪ್ರಾಯ. ಈ ಭಾಗದಲ್ಲಿ ಸುವರ್ಣಮುಖಿ ನದಿಯ ಚಾನೆಲ್ ನೀರು ಇರುವುದರಿಂದ ರುದ್ರಾಕ್ಷಿ ಹೂವಿನ ಕೃಷಿ ಹೆಚ್ಚಾಘಿದೆ.<br /> <br /> <strong>ಭೂರಹಿತರಿಗೆ ಉದ್ಯೋಗ</strong><br /> ಆರು ವರ್ಷಗಳ ಹಿಂದೆ ಬೆಂಗಳೂರಿನ ಹೂವಿನ ವ್ಯಾಪಾರಿಯೊಬ್ಬರು ಇಲ್ಲಿ ಜಮೀನು ಗುತ್ತಿಗೆ ಪಡೆದು ರುದ್ರಾಕ್ಷಿ ಹೂವಿನ ಕೃಷಿ ಆರಂಭಿಸಿದರು. ನಂತರ ಇವರನ್ನು ನೋಡುತ್ತಾ, ಊರಿನವರು ಒಬ್ಬೊಬ್ಬರೇ ರುದ್ರಾಕ್ಷಿ ಹೂವು ಬೆಳೆಯೋದಕ್ಕೆ ಆರಂಭಿಸಿದರು. <br /> <br /> ಹೂವು ಬಿಡಿಸುವುದು, ಕಳೆ ಕೀಳುವುದಕ್ಕೆ ಕೂಲಿ ಆಳುಗಳ ಕೊರತೆಯಿಂದಾಗಿ ಬೆಂಗಳೂರಿನ ಬೆಳೆಗಾರ ಹೂವು ಬೆಳೆಯುವುದನ್ನೇ ಬಿಟ್ಟರು. ಆದರೆ, ರುದ್ರಾಕ್ಷಿ ಹೂವಿನ ಮಾರಾಟದ ರುಚಿ ಹತ್ತಿಸಿಕೊಂಡಿದ್ದ ಸಿದ್ದಾಪುರ, ಗಾಣದೊಡ್ಡಿಯ ಬೆಳೆಗಾರರು ಹೂವಿನ ಕೃಷಿ ಮುಂದುವರಿಸಿದರು.<br /> <br /> ವಿಚಿತ್ರ ಎಂದರೆ, ರುದ್ರಾಕ್ಷಿ ಹೂವು ಬೆಳೆಯುವ ರೈತರಲ್ಲಿ ಬಹುತೇಕರು ಭೂ ರಹಿತರು. ಅವರೆಲ್ಲ ಈ ಹೂವಿನ ಕೃಷಿಗಾಗಿಯೇ ಜಮೀನನ್ನು ಗುತ್ತಿಗೆ ಪಡೆಯುತ್ತಾರೆ. <br /> <br /> ಕೂಲಿಕಾರರ ಸಮಸ್ಯೆಯಿಂದಾಗಿ ಒಂದೂವರೆ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹೂವು ಬೆಳೆಯುವುದಿಲ್ಲ. ಒಂದು ಪಕ್ಷ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಸಕಾಲದಲ್ಲಿ ಹೂ ಕಿತ್ತು ಮಾರಾಟ ಮಾಡುವುದು ಕಷ್ಟ ಎನ್ನುವುದು ಅವರ ಅಭಿಪ್ರಾಯ. ಇನ್ನೊಂದು ವಿಶೇಷ ಅಂದ್ರೆ ಯಾರೂ ಬಿಡಿ ಹೂ ಮಾರುವುದಿಲ್ಲ. ಆ ಹೂವನ್ನು ಬಿಡಿಸಿದ ದಿನವೇ ಅಂದೇ ಹಾರ (ದಿಂಡು) ಕಟ್ಟಿ, ಮರುದಿನ ಬೆಳಗ್ಗೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೋ ಅಥವಾ ಬನಶಂಕರಿ ಮಾರುಕಟ್ಟೆಗೋ ಒಯ್ದು ಬೆಳೆಗಾರರೇ ನಿಂತು ಮಾರಾಟ ಮಾಡುತ್ತಾರೆ. <br /> <br /> <strong>ಮನೆ ಮಂದಿಗೆ ಉದ್ಯೋಗ</strong><br /> `ಒಂದು ದಿನವಿಡೀ ಒಬ್ಬ ವ್ಯಕ್ತಿ ಹೂವು ಕಟ್ಟುವ ಕೆಲಸಕ್ಕೇ ತೊಡಗಿಸಿಕೊಂಡರೆ ಗರಿಷ್ಠ 100 ದಿಂಡು ಕಟ್ಟಬಹುದು~ ಎನ್ನುವುದು ಸಿದ್ದಾಪುರದ ಕಾಳಯ್ಯನವರ ಅಭಿಪ್ರಾಯ. ಗ್ರಾಮದ ಹತ್ತಿರ ಟೀ ಅಂಗಡಿ ಇಟ್ಟುಕೊಂಡಿರುವ ಕಾಳಯ್ಯ, ಹೂವಿನ ಕೃಷಿಗಾಗಿ ಸಮೀಪದಲ್ಲೇ ಜಮೀನನ್ನು ಗುತ್ತಿಗೆ ಪಡೆದಿದ್ದಾರೆ. ಅಲ್ಲಿ ರುದ್ರಾಕ್ಷಿ ಹೂವು ಬೆಳೆಯುತ್ತಾರೆ. <br /> <br /> ವರಮಹಾಲಕ್ಷ್ಮಿಯಿಂದ ದೀಪಾವಳಿ ಹಬ್ಬದವರೆಗೆ ಹೂವು ಕೊಯ್ಲಿಗೆ ಬರುವ ಹಾಗೆ ಬಿತ್ತನೆ ಮಾಡುತ್ತಾರೆ. ಜಮೀನಿನ ಬಳಿಯೇ ಅಂಗಡಿ ಇರುವುದರಿಂದ ಕೊಯ್ದು ಹೂವನ್ನು ಟೀ ಅಂಗಡಿಯ ಅಂಗಳದಲ್ಲೇ ರಾಶಿ ಹಾಕಿಕೊಂಡು ಕುಟುಂಬ ಸದಸ್ಯರೆಲ್ಲ ಸೇರಿ ಹೂವು ಕಟ್ಟುತ್ತಾರೆ.<br /> <br /> `ಅತ್ತ ಅಂಗಡಿ ಉಸ್ತುವಾರಿಯೂ ಆಯ್ತು. ಇತ್ತ ಹೂವಿನ ಕೆಲಸವೂ ಮುಗಿಯಿತು. ಹೀಗೆ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಉತ್ತಮ ವ್ಯಾಪಾರ~ ಎನ್ನುತ್ತಾರೆ ಕಾಳಯ್ಯ.<br /> <br /> `ಒಂದು ಬೆಳೆಯಿಂದ ಮೂರರಿಂದ ನಾಲ್ಕು ಕೊಯ್ಲು ಮಾಡಬಹುದು~ ಸಿದ್ದಾಪುರದ ಮತ್ತೊಬ್ಬ ಕೃಷಿಕ ಕೃಷ್ಣಮೂರ್ತಿ ವಿವರಿಸುತ್ತಾರೆ. ಈ ಹೂವಿನ ಕೃಷಿಗೆ ಬೀಜ, ಗೊಬ್ಬರ, ಔಷಧ, ಆಳಿನ ಕೂಲಿಗಾಗಿ ಮೊದಲು ಬಂಡವಾಳ ತೊಡಗಿಸಬೇಕು.<br /> <br /> ಕಳೆ ಕೀಳುವುದು, ಕೀಟನಾಶಕ ಸಿಂಪಡಣೆಯಂತಹ ವಿಪರೀತ ಕೆಲಸ. ಕನಿಷ್ಠ ಅರ್ಧ ಎಕರೆಗೆ ಕೊಯ್ಲು ಮಾಡಲು ಐವರು ಆಳುಗಳು ಬೇಕು. ಐದಾರು ದಿನ ಹಿಡಿಯುತ್ತದೆ. ಒಂದು ಆಳು ಬೆಳಗ್ಗೆ 7- 12 ಗಂಟೆವರೆಗೆ, 50 ದಿಂಡಿಗಾಗುವಷ್ಟು ಹೂ ಕಿತ್ತು, ಸಂಜೆ ನಾಲ್ಕು ಗಂಟೆಗೆ 50 ದಿಂಡು ಕಟ್ಟಿ ಹೋಗಬಹುದು. ಕೂಲಿ 150 ರೂ (ಹೂ ಕಿತ್ತದ್ದಕ್ಕೆ ರೂ 100 + ಒಂದು ದಿಂಡು ಕಟ್ಟಲು ರೂ 1 ಹಾಗೆ ರೂ 50 ) ಕೊಡ್ತಾರೆ. <br /> <br /> ಒಂದು ದಿಂಡು ಹೂವಿಗೆ ರೂ 8 - 15. ಇದು ಹೊಲ ಅಥವಾ ಮನೆಯಿಂದಲೇ ಖರೀದಿಸುವರಿಗೆ ವಿಧಿಸುವ ದರ. ಮಾರುಕಟ್ಟೆಗೆ ಕೊಂಡೊಯ್ದರೆ ರೂ ಕನಿಷ್ಠ 25. ಇದು ಸಾಮಾನ್ಯ ದಿನದ ದರ. ವರಮಹಾಲಕ್ಷ್ಮಿ, ಆಯುಧಪೂಜೆ, ಶ್ರಾವಣ ಮಾಸ, ಗೌರಿ-ಗಣೇಶ ಹಬ್ಬದ ದಿನಗಳಲ್ಲಿ ರೂ 50 ರಿಂದ ರೂ100 ವರೆಗೂ ದರ ನಿಗದಿಪಡಿಸಲಾಗುತ್ತದೆ. <br /> <br /> ಬೆಂಗಳೂರಿನಲ್ಲಿ ಮಾರುಕಟ್ಟೆ ಉತ್ತಮವಾಗಿರುವುದರಿಂದ ಬಹುತೇಕ ಬೆಳೆಗಾರರೇ ಖುದ್ದಾಗಿ ಮಾರಾಟ ಮಾಡುತ್ತಾರೆ. `ಈ ಲೆಕ್ಕಾಚಾರದ ಪ್ರಕಾರ ರುದ್ರಾಕ್ಷಿ ಹೂವಿನಿಂದ ಒಂದೊಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ ರೂ10 ರಿಂದ ರೂ 15,000 ಆದಾಯಗಳಿಸಬಹುದು~ ಎನ್ನುತ್ತಾರೆ ಕೃಷ್ಣಮೂರ್ತಿ.<br /> <br /> `ಸಮಸ್ಯೆ~ಗಳ ನೆಪಗಳೊಂದಿಗೆ ಹಳ್ಳಿ ಬಿಟ್ಟು ಜನರೆಲ್ಲ ಉದ್ಯೋಗವನ್ನರಿಸಿ ಪಟ್ಟಣ ಸೇರುತ್ತಿರುವ ಈ ದಿನಗಳಲ್ಲಿ ರುದ್ರಾಕ್ಷಿ ಹೂವಿನಂತಹ ಪುಷ್ಪ ಕೃಷಿ ಅಳವಡಿಸಿಕೊಂಡು ಕನಕಪುರ ತಾಲ್ಲೂಕಿನ ಕೆಲವು ಭೂ ರಹಿತರು ಹಳ್ಳಿಗಳಲ್ಲೇ ಉಳಿದಿದ್ದಾರೆ. ಈ ಹೂವು ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿದೆ. <br /> <br /> `ಕೃಷಿ ಉತ್ಪನ್ನಗಳು ಸ್ಥಳದಲ್ಲೇ ಮೌಲ್ಯವರ್ಧಿತವಾಗಬೇಕು. ಮಾರುಕಟ್ಟೆ(ಗ್ರಾಹಕರು) ರೈತರ ಮನೆ ಬಾಗಿಲಿಗೆ ಬರಬೇಕು~ ಎಂಬ ಸಿದ್ಧಾಂತ ಕೂಡ ಈ ಪುಷ್ಪ ಕೃಷಿ ವಿಧಾನದಲ್ಲಿ ಸಾಕಾರಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಮುಕ್ಕಾಲು ಅಡಿ ದಂಡೆ ಹೂವಿಗೆ ರೂ10-15. ಸೀಸನ್ನಲ್ಲಿ ಮಾರಾಟ ಬೆಲೆ ರೂ 75 - 100. ಬೆಳೆಯೋದು ಒಂದೂವರೆ ಎಕರೆಗಿಂತ ಕಡಿಮೆ, ಅರ್ಧ ಎಕರೆಗಿಂತ ಹೆಚ್ಚು. <br /> <br /> ಬೆಳೆಗಾರರೆಲ್ಲ ಗುತ್ತಿಗೆ ರೈತರು. ವರ್ಷಕ್ಕೆ ಕನಿಷ್ಠ ಮೂರು ಹಂತಗಳಲ್ಲಿ ಈ ಹೂವಿನ ವ್ಯಾಪಾರ ಮಾಡುತ್ತಾರೆ. ಅಲ್ಪ ಕಾಲದಲ್ಲಿ ಒಂದಷ್ಟು ಹಣ ಗಳಿಸುತ್ತಾರೆ. ಇಡೀ ಕುಟುಂಬ ಸದಸ್ಯರೇ ಈ ಹೂವಿನ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ~<br /> <br /> ಇದು ರುದ್ರಾಕ್ಷಿ ಹೂವಿನ ವ್ಯಾಪಾರದ ಕಥೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಅರಳುವ ರುದ್ರಾಕ್ಷಿ ಹೂವು ಅಂದವಾಗಿದ್ದು, ಅಲಂಕಾರಕ್ಕೆ ಮೆರುಗು ನೀಡುತ್ತದೆ. ಬಾಳಿಕೆಯಲ್ಲಿ ಗ್ರಾಹಕ ಸ್ನೇಹಿ. ಹಾಗಾಗಿಯೇ ಈ ಹೂವಿಗೆ ಹಬ್ಬ-ಹರಿದಿನಗಳಲ್ಲಿ ಭಾರಿ ಬೇಡಿಕೆ. <br /> <br /> `ರುದ್ರಾಕ್ಷಿ~ ಆಕಾರವಿರುವುದರಿಂದ ಹೂವಿಗೆ ಆ ಹೆಸರು. ರಾಜ್ಯದ ವಿವಿಧೆಡೆ ಅನಂತ ಗೊಂಡೆ, ಗೊಂಡೆ, ಬೇಲಿ ಹೂವು.. ಎಂದು ಕರೆಯುತ್ತಾರೆ. ಕನಕಪುರ ತಾಲ್ಲೂಕಿನಲ್ಲಿ ಈ ಹೂವನ್ನು ವಾಣಿಜ್ಯ ಉದ್ದೇಶದಿಂದ ಬೆಳೆಯುತ್ತಾರೆ.<br /> <br /> <strong>ಹಬ್ಬದಲ್ಲಿ ಭಾರಿ ಬೇಡಿಕೆ</strong><br /> ವರಮಹಾಲಕ್ಷ್ಮಿ, ಗೌರಿ - ಗಣೇಶ ಹಬ್ಬದ ಸಮಯದಲ್ಲಿ ಹೂವಿನ ವಹಿವಾಟು ಜೋರು. ವಾರವಿಟ್ಟರೂ ಬಾಡದ ಈ ಹೂವನ್ನು ಮದುವೆ, ಮುಂಜಿಯಂತಹ ಶುಭ ಸಮಾರಂಭಗಳಲ್ಲಿ ವೇದಿಕೆ ಅಲಂಕಾರಕ್ಕೆ, ನಾಮಫಲಕಗಳ ಅಕ್ಷರ ಬಿಡಿಸಲು ಬಳಸುತ್ತಾರೆ. ಅಂಥ ದಿನಗಳಲ್ಲಿ ಬೆಳೆಗಾರರಿಗೆ ಪುರುಸೊತ್ತಿಲ್ಲದಷ್ಟು ಕೆಲಸ !<br /> <br /> ಕನಕಪುರ ತಾಲ್ಲೂಕಿನ ಹಾರೋಹಳ್ಳಿ - ಬಿಡದಿ ರಸ್ತೆಯಲ್ಲಿ ಆಸು-ಪಾಸಿನ ಹಳ್ಳಿಗಳಾದ ಕೋಡಹಳ್ಳಿ, ಸಿದ್ದಾಪುರ, ಕೆಂಚಪ್ಪನ ದೊಡ್ಡಿ, ಬೈರಮಂಗಲ ಹಾಗೂ ಕೆಲವು ಹಳ್ಳಿಗಳಲ್ಲಿ ರುದ್ರಾಕ್ಷಿ ಹೂವನ್ನು ಹೆಚ್ಚಾಗಿ ಬೆಳೆಯುತ್ತಾರೆ. `ಸಿದ್ದಾಪುರ, ಗಾಣಾಳುದೊಡ್ಡಿ ವ್ಯಾಪ್ತಿಯಲ್ಲಿ 50 ಎಕರೆ ಪ್ರದೇಶದಲ್ಲಿ ರುದ್ರಾಕ್ಷಿ ಹೂವು ಬೆಳೆಯಿರಿ~ ಎನ್ನುವುದು ಪುಷ್ಪ ಕೃಷಿಕ ಕೃಷ್ಣಮೂರ್ತಿ ಅವರ ಅಭಿಪ್ರಾಯ. ಈ ಭಾಗದಲ್ಲಿ ಸುವರ್ಣಮುಖಿ ನದಿಯ ಚಾನೆಲ್ ನೀರು ಇರುವುದರಿಂದ ರುದ್ರಾಕ್ಷಿ ಹೂವಿನ ಕೃಷಿ ಹೆಚ್ಚಾಘಿದೆ.<br /> <br /> <strong>ಭೂರಹಿತರಿಗೆ ಉದ್ಯೋಗ</strong><br /> ಆರು ವರ್ಷಗಳ ಹಿಂದೆ ಬೆಂಗಳೂರಿನ ಹೂವಿನ ವ್ಯಾಪಾರಿಯೊಬ್ಬರು ಇಲ್ಲಿ ಜಮೀನು ಗುತ್ತಿಗೆ ಪಡೆದು ರುದ್ರಾಕ್ಷಿ ಹೂವಿನ ಕೃಷಿ ಆರಂಭಿಸಿದರು. ನಂತರ ಇವರನ್ನು ನೋಡುತ್ತಾ, ಊರಿನವರು ಒಬ್ಬೊಬ್ಬರೇ ರುದ್ರಾಕ್ಷಿ ಹೂವು ಬೆಳೆಯೋದಕ್ಕೆ ಆರಂಭಿಸಿದರು. <br /> <br /> ಹೂವು ಬಿಡಿಸುವುದು, ಕಳೆ ಕೀಳುವುದಕ್ಕೆ ಕೂಲಿ ಆಳುಗಳ ಕೊರತೆಯಿಂದಾಗಿ ಬೆಂಗಳೂರಿನ ಬೆಳೆಗಾರ ಹೂವು ಬೆಳೆಯುವುದನ್ನೇ ಬಿಟ್ಟರು. ಆದರೆ, ರುದ್ರಾಕ್ಷಿ ಹೂವಿನ ಮಾರಾಟದ ರುಚಿ ಹತ್ತಿಸಿಕೊಂಡಿದ್ದ ಸಿದ್ದಾಪುರ, ಗಾಣದೊಡ್ಡಿಯ ಬೆಳೆಗಾರರು ಹೂವಿನ ಕೃಷಿ ಮುಂದುವರಿಸಿದರು.<br /> <br /> ವಿಚಿತ್ರ ಎಂದರೆ, ರುದ್ರಾಕ್ಷಿ ಹೂವು ಬೆಳೆಯುವ ರೈತರಲ್ಲಿ ಬಹುತೇಕರು ಭೂ ರಹಿತರು. ಅವರೆಲ್ಲ ಈ ಹೂವಿನ ಕೃಷಿಗಾಗಿಯೇ ಜಮೀನನ್ನು ಗುತ್ತಿಗೆ ಪಡೆಯುತ್ತಾರೆ. <br /> <br /> ಕೂಲಿಕಾರರ ಸಮಸ್ಯೆಯಿಂದಾಗಿ ಒಂದೂವರೆ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹೂವು ಬೆಳೆಯುವುದಿಲ್ಲ. ಒಂದು ಪಕ್ಷ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಸಕಾಲದಲ್ಲಿ ಹೂ ಕಿತ್ತು ಮಾರಾಟ ಮಾಡುವುದು ಕಷ್ಟ ಎನ್ನುವುದು ಅವರ ಅಭಿಪ್ರಾಯ. ಇನ್ನೊಂದು ವಿಶೇಷ ಅಂದ್ರೆ ಯಾರೂ ಬಿಡಿ ಹೂ ಮಾರುವುದಿಲ್ಲ. ಆ ಹೂವನ್ನು ಬಿಡಿಸಿದ ದಿನವೇ ಅಂದೇ ಹಾರ (ದಿಂಡು) ಕಟ್ಟಿ, ಮರುದಿನ ಬೆಳಗ್ಗೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೋ ಅಥವಾ ಬನಶಂಕರಿ ಮಾರುಕಟ್ಟೆಗೋ ಒಯ್ದು ಬೆಳೆಗಾರರೇ ನಿಂತು ಮಾರಾಟ ಮಾಡುತ್ತಾರೆ. <br /> <br /> <strong>ಮನೆ ಮಂದಿಗೆ ಉದ್ಯೋಗ</strong><br /> `ಒಂದು ದಿನವಿಡೀ ಒಬ್ಬ ವ್ಯಕ್ತಿ ಹೂವು ಕಟ್ಟುವ ಕೆಲಸಕ್ಕೇ ತೊಡಗಿಸಿಕೊಂಡರೆ ಗರಿಷ್ಠ 100 ದಿಂಡು ಕಟ್ಟಬಹುದು~ ಎನ್ನುವುದು ಸಿದ್ದಾಪುರದ ಕಾಳಯ್ಯನವರ ಅಭಿಪ್ರಾಯ. ಗ್ರಾಮದ ಹತ್ತಿರ ಟೀ ಅಂಗಡಿ ಇಟ್ಟುಕೊಂಡಿರುವ ಕಾಳಯ್ಯ, ಹೂವಿನ ಕೃಷಿಗಾಗಿ ಸಮೀಪದಲ್ಲೇ ಜಮೀನನ್ನು ಗುತ್ತಿಗೆ ಪಡೆದಿದ್ದಾರೆ. ಅಲ್ಲಿ ರುದ್ರಾಕ್ಷಿ ಹೂವು ಬೆಳೆಯುತ್ತಾರೆ. <br /> <br /> ವರಮಹಾಲಕ್ಷ್ಮಿಯಿಂದ ದೀಪಾವಳಿ ಹಬ್ಬದವರೆಗೆ ಹೂವು ಕೊಯ್ಲಿಗೆ ಬರುವ ಹಾಗೆ ಬಿತ್ತನೆ ಮಾಡುತ್ತಾರೆ. ಜಮೀನಿನ ಬಳಿಯೇ ಅಂಗಡಿ ಇರುವುದರಿಂದ ಕೊಯ್ದು ಹೂವನ್ನು ಟೀ ಅಂಗಡಿಯ ಅಂಗಳದಲ್ಲೇ ರಾಶಿ ಹಾಕಿಕೊಂಡು ಕುಟುಂಬ ಸದಸ್ಯರೆಲ್ಲ ಸೇರಿ ಹೂವು ಕಟ್ಟುತ್ತಾರೆ.<br /> <br /> `ಅತ್ತ ಅಂಗಡಿ ಉಸ್ತುವಾರಿಯೂ ಆಯ್ತು. ಇತ್ತ ಹೂವಿನ ಕೆಲಸವೂ ಮುಗಿಯಿತು. ಹೀಗೆ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಉತ್ತಮ ವ್ಯಾಪಾರ~ ಎನ್ನುತ್ತಾರೆ ಕಾಳಯ್ಯ.<br /> <br /> `ಒಂದು ಬೆಳೆಯಿಂದ ಮೂರರಿಂದ ನಾಲ್ಕು ಕೊಯ್ಲು ಮಾಡಬಹುದು~ ಸಿದ್ದಾಪುರದ ಮತ್ತೊಬ್ಬ ಕೃಷಿಕ ಕೃಷ್ಣಮೂರ್ತಿ ವಿವರಿಸುತ್ತಾರೆ. ಈ ಹೂವಿನ ಕೃಷಿಗೆ ಬೀಜ, ಗೊಬ್ಬರ, ಔಷಧ, ಆಳಿನ ಕೂಲಿಗಾಗಿ ಮೊದಲು ಬಂಡವಾಳ ತೊಡಗಿಸಬೇಕು.<br /> <br /> ಕಳೆ ಕೀಳುವುದು, ಕೀಟನಾಶಕ ಸಿಂಪಡಣೆಯಂತಹ ವಿಪರೀತ ಕೆಲಸ. ಕನಿಷ್ಠ ಅರ್ಧ ಎಕರೆಗೆ ಕೊಯ್ಲು ಮಾಡಲು ಐವರು ಆಳುಗಳು ಬೇಕು. ಐದಾರು ದಿನ ಹಿಡಿಯುತ್ತದೆ. ಒಂದು ಆಳು ಬೆಳಗ್ಗೆ 7- 12 ಗಂಟೆವರೆಗೆ, 50 ದಿಂಡಿಗಾಗುವಷ್ಟು ಹೂ ಕಿತ್ತು, ಸಂಜೆ ನಾಲ್ಕು ಗಂಟೆಗೆ 50 ದಿಂಡು ಕಟ್ಟಿ ಹೋಗಬಹುದು. ಕೂಲಿ 150 ರೂ (ಹೂ ಕಿತ್ತದ್ದಕ್ಕೆ ರೂ 100 + ಒಂದು ದಿಂಡು ಕಟ್ಟಲು ರೂ 1 ಹಾಗೆ ರೂ 50 ) ಕೊಡ್ತಾರೆ. <br /> <br /> ಒಂದು ದಿಂಡು ಹೂವಿಗೆ ರೂ 8 - 15. ಇದು ಹೊಲ ಅಥವಾ ಮನೆಯಿಂದಲೇ ಖರೀದಿಸುವರಿಗೆ ವಿಧಿಸುವ ದರ. ಮಾರುಕಟ್ಟೆಗೆ ಕೊಂಡೊಯ್ದರೆ ರೂ ಕನಿಷ್ಠ 25. ಇದು ಸಾಮಾನ್ಯ ದಿನದ ದರ. ವರಮಹಾಲಕ್ಷ್ಮಿ, ಆಯುಧಪೂಜೆ, ಶ್ರಾವಣ ಮಾಸ, ಗೌರಿ-ಗಣೇಶ ಹಬ್ಬದ ದಿನಗಳಲ್ಲಿ ರೂ 50 ರಿಂದ ರೂ100 ವರೆಗೂ ದರ ನಿಗದಿಪಡಿಸಲಾಗುತ್ತದೆ. <br /> <br /> ಬೆಂಗಳೂರಿನಲ್ಲಿ ಮಾರುಕಟ್ಟೆ ಉತ್ತಮವಾಗಿರುವುದರಿಂದ ಬಹುತೇಕ ಬೆಳೆಗಾರರೇ ಖುದ್ದಾಗಿ ಮಾರಾಟ ಮಾಡುತ್ತಾರೆ. `ಈ ಲೆಕ್ಕಾಚಾರದ ಪ್ರಕಾರ ರುದ್ರಾಕ್ಷಿ ಹೂವಿನಿಂದ ಒಂದೊಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ ರೂ10 ರಿಂದ ರೂ 15,000 ಆದಾಯಗಳಿಸಬಹುದು~ ಎನ್ನುತ್ತಾರೆ ಕೃಷ್ಣಮೂರ್ತಿ.<br /> <br /> `ಸಮಸ್ಯೆ~ಗಳ ನೆಪಗಳೊಂದಿಗೆ ಹಳ್ಳಿ ಬಿಟ್ಟು ಜನರೆಲ್ಲ ಉದ್ಯೋಗವನ್ನರಿಸಿ ಪಟ್ಟಣ ಸೇರುತ್ತಿರುವ ಈ ದಿನಗಳಲ್ಲಿ ರುದ್ರಾಕ್ಷಿ ಹೂವಿನಂತಹ ಪುಷ್ಪ ಕೃಷಿ ಅಳವಡಿಸಿಕೊಂಡು ಕನಕಪುರ ತಾಲ್ಲೂಕಿನ ಕೆಲವು ಭೂ ರಹಿತರು ಹಳ್ಳಿಗಳಲ್ಲೇ ಉಳಿದಿದ್ದಾರೆ. ಈ ಹೂವು ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿದೆ. <br /> <br /> `ಕೃಷಿ ಉತ್ಪನ್ನಗಳು ಸ್ಥಳದಲ್ಲೇ ಮೌಲ್ಯವರ್ಧಿತವಾಗಬೇಕು. ಮಾರುಕಟ್ಟೆ(ಗ್ರಾಹಕರು) ರೈತರ ಮನೆ ಬಾಗಿಲಿಗೆ ಬರಬೇಕು~ ಎಂಬ ಸಿದ್ಧಾಂತ ಕೂಡ ಈ ಪುಷ್ಪ ಕೃಷಿ ವಿಧಾನದಲ್ಲಿ ಸಾಕಾರಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>