ಡಿ.31ರಂದು ಆಂಧ್ರದ ತಿರುಮಲದಿಂದ ಕೇರಳದ ಶಬರಿಮಲೆಗೆ 13 ಮಂದಿ ಅಯ್ಯಪ್ಪ ಮಾಲಾಧಾರಿಗಳು ಪಾದಯಾತ್ರೆ ಆರಂಭಿಸಿದರು. ಅಂದು ಆರಂಭವಾದ ಪಾದಯಾತ್ರೆ ಸದ್ಯ ರಾಜ್ಯದ ಚಿಕ್ಕಮಗಳೂರಿನ ಕೊಟ್ಟಿಗೆಹಾರ ತಲುಪಿದೆ. ಈ ವರೆಗೆ 480 ಕಿ. ಮೀ ನಡೆದು ಬಂದಿರುವ ಭಕ್ತರ ಹಿಂದೆ ಶ್ವಾನವೂ ನಡೆದು ಬರುತ್ತಿದೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.