ಇದು ಬಾಗಲಕೋಟೆ ತಾಲ್ಲೂಕಿನ ಶಿರೂರು ಬಳಿಯ ಮಹಾಂತತೀರ್ಥ ಆಶ್ರಮದಲಿ ಕಾಣಸಿಗುವ ಹಸಿರ ಹಾದಿಯ ನೋಟ. ಶಿರೂರು ಹೊರವಲಯದಲ್ಲಿ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಕಮತಗಿಯತ್ತ ಸಾಗುವಾಗ ಬಲಕ್ಕೆ ಅರ್ಧ ಕಿಲೊಮೀಟರ್ ಮಣ್ಣಿನ ದಾರಿ ಸವೆಸಿದರೆ ಮಹಾಂತ ತೀರ್ಥ ಸಿಗುತ್ತದೆ. ಸುತ್ತಲೂ ಬೋಳು ಗುಡ್ಡ, ಕಲ್ಲು ಬಂಡೆಗಳಿಂದ ಆವೃತವಾದ ಕುರುಚಲು ಕಾಡಿನ ನಡುವೆ ಕಾಣಸಿಕ್ಕುವ ಈ ಹಸಿರು ಆಗರದೊಳಗೆ ಸಾಗಿದರೆ ಸಹ್ಯಾದ್ರಿ ತಪ್ಪಲಿನ ಯಾವುದೋ ದಟ್ಟ ಅರಣ್ಯದೊಳಗೆ ಹೊಕ್ಕ ಭಾವ.