ಕೋವಿಡ್ ಎರಡನೇ ಅಲೆ ಮಾರಣಾಂತಿಕ ಸ್ವರೂಪ ಪಡೆದುಕೊಂಡಿದೆ. ಮೊದಲ ಅಲೆಯ ವೇಳೆ ತಣ್ಣಗೆ ಇದ್ದ ಹಳ್ಳಿಗಳಲ್ಲೂ ಈಗ ಬಿರುಗಾಳಿ ಎದ್ದಿದೆ. ಇದನ್ನು ತಡೆಯಲು ಬೆಂಗಳೂರು ನಗರ ಜಿಲ್ಲೆಯ ಆಡಳಿತ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆರೋಗ್ಯ ಕೇಂದ್ರಗಳ ಸ್ಥಿತಿಗತಿ ಹೇಗಿದೆ. ಲಸಿಕೆಗಾಗಿ ಪರದಾಟ ತಪ್ಪಿದೆಯಾ. ಇದನ್ನೆಲ್ಲಾ ತೆರೆದಿಡುವ ಪ್ರಯತ್ನ ಇದು.