ದಾವಣಗೆರೆಯ ಕುಂದವಾಡ ಕೆರೆಯು ಪಕ್ಷಿ ವೀಕ್ಷಕರಿಗೂ, ಪರಿಸರ ಪ್ರೇಮಿಗಳಿಗೂ ನೆಚ್ಚಿನ ತಾಣ. ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಸಂಗ್ರಹಾಗಾರವಾಗಿರುವ ಈ ಕೆರೆಯಲ್ಲಿ ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬರುವ ಮಳೆಗಾಲದೊಳಗೆ ಕಾಮಗಾರಿ ಮುಗಿಯುವುದೇ? ಇಲ್ಲಿಯ ಜೈವಿಕ ವೈವಿಧ್ಯ ಪುನಶ್ಚೇತನಗೊಳ್ಳುವುದೇ ಎಂಬುದು ನಾಗರಿಕರ ಪ್ರಶ್ನೆ.