ಮೈಸೂರು ಜಿಲ್ಲೆಯ ಗ್ರಾಮಗಳ ಪ್ರವೇಶದ್ವಾರದಲ್ಲೇ ಶ್ರದ್ಧಾಂಜಲಿ ಫ್ಲೆಕ್ಸ್ಗಳು ಎಲ್ಲಾ ಕಥೆಗಳನ್ನೂ ಹೇಳುತ್ತವೆ. ಇವರಲ್ಲಿ ಬಹುತೇಕರು ಕೋವಿಡ್ನಿಂದಲೇ ಮೃತಪಟ್ಟವರು. ಅಲ್ಲಲ್ಲಿ ಗ್ರಾಮಗಳು ಸೀಲ್ಡೌನ್ ಆಗಿವೆ. ಕೆಲವೆಡೆ ಗ್ರಾಮಸ್ಥರೇ ತಮ್ಮ ಊರಿನ ರಸ್ತೆಗೆ ಬೇಲಿ ಹಾಕಿಕೊಂಡಿದ್ದಾರೆ. ಇಂತಹ ಆತಂಕದಲ್ಲೇ ಬದುಕುತ್ತಿರುವ ಇವರಿಗೆ ದಿಕ್ಕೇ ತೋಚದ ಪರಿಸ್ಥಿತಿ ಸೃಷ್ಟಿಯಾಗಿದೆ..