ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವಾದಲ್ಲಿ (ಟೊಂಕಾ ಸಮೀಪ) ಶರಾವತಿ ನದಿಯು ಅರಬ್ಬಿ ಸಮುದ್ರದ ಸೇರುತ್ತದೆ. ಅಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಒಂದುವೇಳೆ, ಯೋಜನೆ ಜಾರಿಯಾದರೆ ಮೀನುಗಾರಿಕೆಗೆ ತೊಂದರೆಯಾಗಲಿದೆ. ಅಲ್ಲದೇ ‘ಆಲಿವ್ ರಿಡ್ಲೆ’ ಕಡಲಾಮೆಗಳ ಸಂತತಿಗೂ ಧಕ್ಕೆಯಾಗಲಿದೆ ಎಂಬ ಆತಂಕ ಸ್ಥಳೀಯರದ್ದು. ಯೋಜನೆಯೇನು, ಸ್ಥಳೀಯರು, ತಜ್ಞರು, ಅಧಿಕಾರಿಗಳು ಹೇಳುವುದೇನು? ವಿವರಗಳು ಈ ವಿಡಿಯೊ ವರದಿಯಲ್ಲಿವೆ.