ನಾಯಕ ನಟ ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರ ಸೆಪ್ಟೆಂಬರ್ 23ರಂದು ತೆರೆ ಕಾಣಲಿದೆ. ‘ಕನ್ನಡದಲ್ಲಿ ಮೊದಲ ಬಾರಿಗೆ ಕೊಕ್ಕೊ ಕ್ರೀಡೆಯ ಕಥಾ ಹಂದರ ಸಿನಿಮಾ ಬರುತ್ತಿದೆ. ಈ ಚಿತ್ರದ ಭಾಗವಾಗಿರುವುದಕ್ಕೆ ಸಂತಸ ಇದೆ. ಪರಿಶ್ರಮದಿಂದ ಚಿತ್ರ ಮಾಡಿದ್ದು, ಕಾಮಿಡಿ ಜತೆಗೆ ಒಳ್ಳೆಯ ಕಥೆ ಇದೆ’ ಎಂದು ಚಿತ್ರದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡ ನಟ ಶರಣ್, ಬೆಣ್ಣೆದೋಸೆ ನಗರಿ ದಾವಣಗೆರೆ ಬಗ್ಗೆಯೂ ಖುಷಿ ಹಂಚಿಕೊಂಡರು.