ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪುನೀತ್ ರಾಜ್ಕುಮಾರ್ ಅವರು ಸಾಯುವ ಮೂರು ದಿನ ಮುನ್ನ ನನಗೆ ಕರೆ ಮಾಡಿದ್ದರು. ಅರಣ್ಯ ಅಥವಾ ವನ್ಯಜೀವ ರಕ್ಷಣೆ ಕುರಿತ ಕಥೆ ಹೊಂದಿರುವ ಚಿತ್ರದ ಟೀಸರ್ ಬಿಡುಗಡೆ ಮಾಡಬೇಕು ಎಂದು ಆಹ್ವಾನಿಸಿದ್ದರು’ ಎಂದು ನೆನಪು ಮಾಡಿಕೊಂಡರು.