ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದ 36 ಎಕರೆ ವಿಸ್ತೀರ್ಣದ ಕ್ಯಾಲಸನಹಳ್ಳಿ ಕೆರೆ ಕೆರೆ 45 ದಿನಗಳಲ್ಲಿ ಅಭಿವೃದ್ಧಿ ಕಂಡಿದೆ. ಅದೂ ಕಡಿಮೆ ವೆಚ್ಚದಲ್ಲಿ. ಇದೊಂದೇ ಅಲ್ಲ, ಆನೇಕಲ್ ತಾಲ್ಲೂಕಿನ 11 ಕೆರೆಗಳು ಇಂತಹದ್ದೇ ರೀತಿ ಅಭಿವೃದ್ಧಿ ಕಂಡಿವೆ. ಅದಕ್ಕೆ ಕಾರಣ ಕೆರೆ ಸಂರಕ್ಷಣೆ ಕಾರ್ಯಕರ್ತ ಆನಂದ ಮಲ್ಲಿಗವಾಡ.