ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ‘ಕೋವಿಡ್ ನಂತರ, ಗ್ರಾಮೀಣ ಭಾಗದಲ್ಲಿ ಹಲವರು ಹೈನುಗಾರಿಕೆಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ₹50 ಸಾವಿರಕ್ಕೆ ಸಿಂಧಿ ಹಸು ಕೊಂಡು ತಂದರೆ ಅವು ಮೂರು ದಿನವೂ ಬದುಕುತ್ತಿಲ್ಲ. ಸರ್ಕಾರ ಇತ್ತ ಗಮನ ಹರಿಸಬೇಕು‘ ಎಂದು ಆಗ್ರಹಿಸಿದರು.