ರಾಜ್ಯ ರಾಜಕೀಯದಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ ರಮೇಶ ಭೂಸನೂರ. ಫಲಿತಾಂಶ ಹೊರ ಬರುವುದರೊಂದಿಗೇ, ಬಿಜೆಪಿ ಗೆಲುವಿಗೆ–ಕಾಂಗ್ರೆಸ್ ಸೋಲಿಗೆ ಕಾರಣವಾದ ಅಂಶಗಳಾವುವು ಎಂಬ ಬಗ್ಗೆ ಚರ್ಚೆಯೂ ಶುರುವಾಗಿದೆ. ಗುಜರಾತ್ ಮಾದರಿ ರಣತಂತ್ರ ರೂಪಿಸಿದ್ದಕ್ಕೆ ಈ ಗೆಲುವು ಸಾಧ್ಯವಾಗಿದೆ ಎನ್ನುತ್ತಾರೆ ಉಸ್ತುವಾರಿಯಾಗಿದ್ದ ಲಕ್ಷ್ಮಣ ಸವದಿ.