ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಗರಿಗೆದರಿದೆ. ದಸರಾ ಗಜಪಡೆಗೆ ಮಂಗಳ ವಾದ್ಯಗಳು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಗಿದೆ. ಅರಣ್ಯಭವನದಿಂದ ಅರಮನೆಯತ್ತ ಕಾಲ್ನಡಿಗೆಯಲ್ಲಿ ಸಾಗಿದ ಎಂಟು ಆನೆಗಳನ್ನೊಳಗೊಂಡ ಗಜ ಪಡೆಯ ನಡಿಗೆಯನ್ನು ಮೈಸೂರಿಗರು ಕಣ್ತುಂಬಿಕೊಂಡರು. ಅರಮನೆಯಲ್ಲಿ ಭವ್ಯ, ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.