ಬೆಂಗಳೂರಿನಲ್ಲಿ ಜೂನ್ 8ರಿಂದ ದೇವಾಲಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ, ಭಕ್ತಾದಿಗಳಿಗೆ ಉಷ್ಣಾಂಶ ಪರೀಕ್ಷೆ ನಡೆಸಿ ದೇವಸ್ಥಾನದೊಳಗೆ ಬಿಡಲಾಗುತ್ತಿದೆ. ಮಾಸ್ಕ್ ಧರಿಸುವುದು ಕಡ್ಡಾಯ. ಭಕ್ತರಿಗೆ ಸ್ಯಾನಿಟೈಜರ್ ನೀಡುತ್ತಿರುವುದು ಕಂಡು ಬಂತು. ಪರಸ್ಪರ ಅಂತರ ಕಾಯ್ದುಕೊಂಡು ದರ್ಶನ ಪಡೆಯುತ್ತಿದ್ದರು. ಬಹಳಷ್ಟು ದೇವಾಲಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.