ಶನಿವಾರ, 3 ಜನವರಿ 2026
×
ADVERTISEMENT
ADVERTISEMENT

ಪ್ರೀತಿಗಾಗಿ, ಪ್ರೀತಿಯಿಂದ: ಕೇಳಲೇಬೇಕು ನೀವು ಇವರ ನುಡಿಮುತ್ತು

Published : 2 ಜನವರಿ 2026, 23:30 IST
Last Updated : 2 ಜನವರಿ 2026, 23:30 IST
ಫಾಲೋ ಮಾಡಿ
Comments
ಘನವಾದ ಸಂದೇಶಗಳಿಂದ ಜನಮನದಲ್ಲಿ ಸಂಚಲನ ಮೂಡಿಸಿದ ಬಹಳಷ್ಟು ಮಹಿಳೆಯರನ್ನು ದೇಶ ಕಂಡಿದೆ. ನಮ್ಮ ಬದುಕಿನಲ್ಲಿ ಸಕಾರಾತ್ಮಕ ನಿಲುವಿನ ಮಹತ್ವವನ್ನು ಎತ್ತಿ ಹಿಡಿಯಬಲ್ಲ ಅಂತಹ ಅನುಭವಜನ್ಯ ಮಾತುಗಳಿಗೆ, ಭಾಷಣಗಳಿಗೆ ಹೆಸರಾದ ಕೆಲವು ಮಹಿಳೆಯರ ಮಾಹಿತಿ ಇಲ್ಲಿದೆ. ಯೂಟ್ಯೂಬ್‌ನಲ್ಲಿ ಲಭ್ಯವಿರುವ ಇಂತಹವರ ಭಾಷಣಗಳ ಕೇಳುವಿಕೆಯು ಹೊಸ ವರ್ಷವನ್ನು ಆಹ್ಲಾದದಿಂದ ಎದುರುಗೊಳ್ಳಲು ನಮ್ಮ ಹೆಣ್ಣುಮಕ್ಕಳಿಗೆ ನವಚೈತನ್ಯ ನೀಡಲಿ ಎಂಬ ಆಶಯ ‘ಭೂಮಿಕಾ’ದು.
‌ಪುರುಷರೇ, ಮಹಿಳೆಯರ ಬಗೆಗಿನ ಸಂಕುಚಿತ ಮನೋಭಾವದಿಂದ ಮೊದಲು ಹೊರಬನ್ನಿ
ಸರೋಜಿನಿ ನಾಯ್ಡು
ಮದುವೆಯಾಗಿ ಮಕ್ಕಳನ್ನು ಹಡೆಯುವುದಕ್ಕಷ್ಟೇ ಮಹಿಳೆಯರು ಜನಿಸಿಲ್ಲ. ಮೊದಲು ಅವರು ಸ್ವಾವಲಂಬಿಗಳಾಗಬೇಕು, ನಂತರ ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸಬೇಕು.
ಕಿರಣ್‌ ಬೇಡಿ
ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಏಕೆಂದರೆ ಅದು ಸ್ವಂತ ಆಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. 
ಸೋನಾಲಿ ಬೇಂದ್ರೆ
ಪ್ರೀತಿಗಾಗಿ, ಪ್ರೀತಿಯಿಂದ
-
-
ಮಾತಿನ ಮಂಟಪ ಕಟ್ಟಿದವರು
ಇಂದಿರಾ ಗಾಂಧಿ:
ಅತ್ಯಂತ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಇಂದಿರಾ ಗಾಂಧಿ, ಲೆಕ್ಕವಿಲ್ಲದಷ್ಟು ರಾಜಕೀಯ ಭಾಷಣಗಳನ್ನು ಮಾಡಿದ್ದಾರೆ. ಅವುಗಳಲ್ಲಿ, ರಾಷ್ಟ್ರೀಯ ಏಕತೆ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಪರವಾದ ಅವರ ಭಾಷಣಗಳು ಸ್ಮರಣಾರ್ಹವಾಗಿವೆ.
ಇಂದ್ರಾ ನೂಯಿ:
ಪೆಪ್ಸಿಕೊದ ಮಾಜಿ ಸಿಇಒ ಇಂದ್ರಾ ನೂಯಿ, ನಾಯಕತ್ವ, ಲಿಂಗ ಸಮಾನತೆ, ಕಾರ್ಯಸ್ಥಳದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳಿಗೆ ವಸ್ತುನಿಷ್ಠ ಪರಿಹಾರ ಒದಗಿಸುವ ಅರ್ಥಪೂರ್ಣವಾದ ಭಾಷಣಗಳಿಗೆ ಹೆಸರಾಗಿದ್ದಾರೆ.
ಸುಧಾ ಮೂರ್ತಿ:
ಸರಳತೆ, ಪ್ರಾಮಾಣಿಕತೆ ಮತ್ತು ಸಹನಶೀಲತೆಯ ಪರವಾಗಿ ಶೈಕ್ಷಣಿಕ ಸಂಸ್ಥೆಗಳು, ಕಾರ್ಪೊರೇಟ್‌ ಸಂಸ್ಥೆಗಳ ಕಾರ್ಯಕ್ರಮಗಳು, ಸಾಹಿತ್ಯ ಉತ್ಸವಗಳಲ್ಲಿ ಮಾಡಿರುವ ಸುಧಾ ಮೂರ್ತಿ ಅವರ ಭಾಷಣಗಳು ಜನಪ್ರಿಯತೆ ಗಳಿಸಿವೆ.
ಅರುಣಿಮಾ ಸಿನ್ಹಾ:
ಅವಘಡದಲ್ಲಿ ಕಾಲು ಕಳೆದುಕೊಂಡರೂ ಅದನ್ನು ಸವಾಲಾಗಿ ಸ್ವೀಕರಿಸಿ ಮೌಂಟ್‌ ಎವರೆಸ್ಟ್‌ ಏರಿದವರು ಅರುಣಿಮಾ. ಮನೋಸ್ಥೈರ್ಯವಿದ್ದರೆ ಅಡೆತಡೆಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯಬಯಸುವವರು ಅವರ ಭಾಷಣಗಳನ್ನು ಕೇಳಿಯೇ ತೀರಬೇಕು.
ಲಕ್ಷ್ಮಿ ಅಗರವಾಲ್‌:
ಕೃತಕತೆಯ ಸೋಂಕಿಲ್ಲದ ಲಕ್ಷ್ಮಿ ಅವರ ಭಾವನಾತ್ಮಕ ಭಾಷಣಗಳು ಸಮಾಜಕ್ಕೆ ಪ್ರಬಲ ಸಂದೇಶಗಳನ್ನು ನೀಡುತ್ತವೆ. ತನ್ನ ದೇಹದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದುವುದು, ಸ್ವಯಂ ಸಬಲೀಕರಣದ ಬಗೆಗಿನ ಅವರ ಸಲಹೆಗಳು ಆ್ಯಸಿಡ್‌ ದಾಳಿಯ ಸಂತ್ರಸ್ತರಿಗೆ ವರದಾನವಾಗಿವೆ. ಮಾತ್ರವಲ್ಲದೆ ಆ್ಯಸಿಡ್‌ ಮಾರಾಟಕ್ಕೆ ನಿಯಂತ್ರಣ ಹಾಕಬೇಕೆಂದು ಬಲವಾಗಿ ಪ್ರತಿಪಾದಿಸಿರುವ ಭಾಷಣಗಳು, ಈ ಆ್ಯಸಿಡ್‌ ಸಂತ್ರಸ್ತೆಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿವೆ.
ತೇಜಸ್ವಿನಿ ಮನೋಜ್ಞ:
ಭಾರತದ ನವಪೀಳಿಗೆಯ ಆತ್ಮವಿಶ್ವಾಸದ ಪ್ರತೀಕದಂತಿರುವ ತೇಜಸ್ವಿನಿ, ಸೌಂದರ್ಯ ಮತ್ತು ಬುದ್ಧಿವಂತಿಕೆ ಮೇಳೈಸಿದವರು. ವೃತ್ತಿಯಲ್ಲಿ ವೈದ್ಯೆ, ಪ್ರವೃತ್ತಿಯಲ್ಲಿ ಮಾಡೆಲ್‌ ಆಗಿರುವ ಈ ಸುಂದರಿ, ಆತ್ಮಸ್ಥೈರ್ಯ, ಸ್ವಯಂ ಶಿಸ್ತು, ಸಮಯ ನಿರ್ವಹಣೆಯ ಬಗ್ಗೆ ಮಾಡುವ ಭಾಷಣಗಳು ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಜಾಗತಿಕ ಮನ್ನಣೆ ಗಳಿಸಿದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT