ಭಾರತ ಸಂವಿಧಾನದ ಅಂತಿಮ ಕರಡನ್ನು ಸರ್ಕಾರದ ಅಂಗೀಕಾರಕ್ಕೆ ಮಂಡಿಸಿದ್ದು 1949ರ ನ. 26ರಂದು. ಅದೇ ದಿನ ಸ್ವೀಕಾರವೂ ಆಯಿತು. ಆದರೆ, ಸಂವಿಧಾನ ಅನುಷ್ಠಾನಕ್ಕೆ ಬಂದಿದ್ದು 1950ರ ಜ. 26. ಹಾಗಾಗಿ, ಈ ದಿನವನ್ನು ಗಣರಾಜ್ಯೋತ್ಸವನ್ನಾಗಿ ಆಚರಿಸಲಾಗುತ್ತದೆ.ಸಂವಿಧಾನದ ಮೂಲ ಆಶಯವಾಗಿರುವ ಸಮಾನತೆಯು, ಸ್ತ್ರೀ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಬಗ್ಗೆ ಸಾಧಕಿಯರ ಅನಿಸಿಕೆಗಳನ್ನು ಮಂಜುಶ್ರೀ ಎಂ. ಕಡಕೋಳ ನಿರೂಪಿಸಿದ್ದಾರೆ.