<p><strong>ಕಾಬೂಲ್</strong>: ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್ನ ಉತ್ತರ ಭಾಗದಲ್ಲಿರುವ ಪಂಜ್ಶೀರ್ ಕಣಿವೆ ತಾಲಿಬಾನಿಗಳಿಗೆ ಪ್ರತಿರೋಧ ಒಡ್ಡುತ್ತಲೇ ಇದೆ. ತಾಲಿಬಾನಿಗಳು ನಡೆಸುತ್ತಿರುವ ದೊಡ್ಡ ಪ್ರಮಾಣದ ದಾಳಿಗಳನ್ನು ಪಂಜ್ಶೀರ್ ಕಣಿವೆಯ ಹೋರಾಟಗಾರರು ಹಿಮ್ಮೆಟ್ಟಿಸುತ್ತಲೇ ಇದ್ದಾರೆ.</p>.<p>ರಾಷ್ಟ್ರೀಯ ಪ್ರತಿರೋಧ ಪಡೆಯ (ಎನ್ಆರ್ಎಫ್) ಹೋರಾಟಗಾರರು ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ಪ್ರತಿದಾಳಿಗಳನ್ನು ನಡೆಸುತ್ತಲೇ ಇದ್ದಾರೆ. ಪತನಗೊಂಡಿರುವ ಆಫ್ಗಾನ್ ಭದ್ರತಾ ಪಡೆ ಮತ್ತು ತಾಲಿಬಾನ್ ವಿರೋಧಿ ಹೋರಾಟಗಾರರು ಒಂದಾಗಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಸಂಘರ್ಷ ತೀವ್ರಗೊಳ್ಳುತ್ತಲೇ ಸಾಗಿದೆ.</p>.<p>ಪಂಜ್ಷಿರ್ ಬಿಕ್ಕಟ್ಟಿನ ಕುರಿತು ಟ್ವೀಟ್ ಮಾಡಿರುವ ಹಿರಿಯ ತಾಲಿಬಾನ್ ಅಧಿಕಾರಿ ಅಮೀರ್ ಖಾನ್, 'ನನ್ನ ಸಹೋದರರೇ, ಮಾತುಕತೆಯ ಮೂಲಕ ಪಂಜ್ಶೀರ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ, ದುರದೃಷ್ಟವಶಾತ್ ಎಲ್ಲವೂ ವ್ಯರ್ಥವಾಯಿತು' ಎಂದು ತಿಳಿಸಿದ್ದಾರೆ.</p>.<p>'ಈಗ ಮಾತುಕತೆ ವಿಫಲವಾಗಿದೆ ಮತ್ತು ಪಂಜ್ಷಿರ್ ಅನ್ನು ಮುಜಾಹಿದ್ದೀನ್ (ತಾಲಿಬಾನ್) ಸುತ್ತುವರೆದಿದ್ದಾನೆ. ಶಾಂತಿಯುತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಬಯಸದ ಜನರು ಇನ್ನೂ ಒಳಗಿದ್ದಾರೆ' ಎಂದು ಅವರು ಹೇಳಿದ್ದಾರೆ.</p>.<p>ಪತನಗೊಂಡ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬಿಸ್ಮಿಲ್ಲಾ ಮೊಹಮ್ಮದಿ ಅವರು 'ಪಂಜ್ಶೀರ್ ಮೇಲೆ ಮಂಗಳವಾರ ರಾತ್ರಿ ತಾಲಿಬಾನ್ ಮತ್ತೆ ದಾಳಿ ನಡೆಸಿದೆ' ಎಂದು ತಿಳಿಸಿದ್ದಾರೆ.</p>.<p>'ನಿನ್ನೆ(ಮಂಗಳವಾರ) ರಾತ್ರಿ ತಾಲಿಬಾನ್ ಭಯೋತ್ಪಾದಕರು ಪಂಜ್ಶೀರ್ ಮೇಲೆ ದಾಳಿ ಮಾಡಿದರು. ಆದರೆ, ಅವರು ಸೋತಿದ್ದಾರೆ' ಎಂದು ಮೊಹಮ್ಮದಿ ಬುಧವಾರ ಟ್ವೀಟ್ ಮಾಡಿದ್ದಾರೆ. ಈ ವೇಳೆ 34 ತಾಲಿಬಾನಿಗಳು ಮೃತಪಟ್ಟಿದ್ದು, 65 ಮಂದಿ ಗಾಯಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.</p>.<p>'ನಮ್ಮ ರಕ್ತದ ಕೊನೆಯ ಹನಿ ಇರುವ ತನಕ ನಾವು ಪಂಜ್ಶೀರ್ ಅನ್ನು ರಕ್ಷಿಸಲು ಸಿದ್ಧರಿದ್ದೇವೆ' ಎಂದು ಸುದ್ದಿಸಂಸ್ಥೆ ಎಎಫ್ಪಿಗೆ ಅಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾರೆ.</p>.<p>'ಪ್ರತಿಯೊಬ್ಬರ ಭುಜದ ಮೇಲೆ ಆಯುಧವಿದೆ ಮತ್ತು ಗುಂಡು ಹಾರಿಸಲು ಅದು ಸಿದ್ಧವಾಗಿದೆ" ಎಂದು ಇನ್ನೊಬ್ಬ ನಿವಾಸಿ ಹೇಳಿದ್ದಾರೆ.</p>.<p>'ರಷ್ಯನ್ನರ ಆಡಳಿತದಲ್ಲಿ, ಬ್ರಿಟಿಷರ ಆಡಳಿತದಲ್ಲಿ, ತಾಲಿಬಾನ್ನ ಹಿಂದಿನ ಆಡಳಿತದಲ್ಲಿ ಪಂಜ್ಶೀರ್ ಕಣಿವೆಯನ್ನು ರಕ್ಷಿಸಿಕೊಂಡಿದ್ದೇವೆ. ಅದನ್ನು ನಾವು ಮುಂದುವರಿಸುತ್ತೇವೆ' ಎಂದು ಹೋರಾಟಗಾರನೊಬ್ಬ ತಿಳಿಸಿದ್ದಾನೆ.</p>.<p>ಪಂಜ್ಶೀರ್ನ ಯುವ ಹೋರಾಟಗಾರ ಅಹಮ್ಮದ್ ಮಸೂದ್, ಸಾವಿರಾರು ಸ್ಥಳೀಯ ಯೋಧರನ್ನು ಸಜ್ಜುಗೊಳಿಸಿ ಕಣಿವೆಯನ್ನು ಕಾಯಲು ರಕ್ಷಣಾಪಡೆಯನ್ನು ಕಟ್ಟಿಕೊಂಡಿದ್ದಾರೆ.</p>.<p>1980ರ ದಶಕದಲ್ಲಿ ಸೋವಿಯತ್ ವಿರುದ್ಧದ ಹೋರಾಟ ಮತ್ತು 1990ರ ದಶಕದಲ್ಲಿ ತಾಲಿಬಾನ್ ವಿರುದ್ಧ ಹೋರಾಟದಲ್ಲಿ ಮಸೂದ್ ತಂದೆ ಮುಂಚೂಣಿಯಲ್ಲಿ ಇದ್ದರು. ಅವರನ್ನು ‘ಪಂಜ್ಶೀರ್ನ ಸಿಂಹ’ ಎಂದೇ ಕರೆಯುತ್ತಿದ್ದರು. 2001ರ ಸೆಪ್ಟೆಂಬರ್ 11ರ ದಾಳಿಗೆ (9/11) ಎರಡು ದಿನ ಮೊದಲು ಅವರನ್ನು ಅಲ್ಖೈದಾ ಹತ್ಯೆ ಮಾಡಿತ್ತು.</p>.<p><strong>ಇವನ್ನೂ</strong><strong>ಓದಿ<br />*</strong><a href="https://cms.prajavani.net/world-news/taliban-fire-in-the-air-to-control-crowd-at-kabul-airport-after-afghan-entry-860201.html" itemprop="url" target="_blank">ಅಫ್ಗನ್ ತೊರೆವ ಧಾವಂತ: 7 ಬಲಿ</a><br /><strong>*</strong><a href="https://cms.prajavani.net/world-news/ashraf-ghani-can-return-to-afghanistan-says-taliban-leader-khalil-haqqani-860205.html" itemprop="url" target="_blank">ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್</a><br /><strong>*</strong><a href="https://cms.prajavani.net/world-news/joe-biden-says-troops-withdrawal-from-afghanistan-was-a-logical-rational-and-right-decision-860208.html" itemprop="url" target="_blank">ಆಫ್ಗಾನ್ನಿಂದ ಸೇನೆ ಹಿಂತೆಗೆತ ತಾರ್ಕಿಕ ಮತ್ತು ಸರಿಯಾದ ನಿರ್ಧಾರ: ಬೈಡನ್</a><br /><strong>*</strong><a href="https://cms.prajavani.net/world-news/pakistan-intel-agency-played-key-role-in-taliban-takeover-of-afghanistan-says-us-congressman-860218.html" itemprop="url" target="_blank">ಅಫ್ಗಾನ್ ತಾಲಿಬಾನ್ ವಶವಾಗಲು ಪಾಕ್ ಗುಪ್ತಚರ ಸಂಸ್ಥೆ ಕೈವಾಡ: ಅಮೆರಿಕ ಸಂಸದ</a><br />*<a href="https://cms.prajavani.net/world-news/kabul-airlift-is-accelerating-but-still-hampered-by-chaos-us-joe-biden-860224.html" itemprop="url" target="_blank">ಕಾಬೂಲ್ನಿಂದ ಜನರ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ತ್ವರಿತ: ಜೋ ಬೈಡನ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಬೂಲ್</strong>: ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್ನ ಉತ್ತರ ಭಾಗದಲ್ಲಿರುವ ಪಂಜ್ಶೀರ್ ಕಣಿವೆ ತಾಲಿಬಾನಿಗಳಿಗೆ ಪ್ರತಿರೋಧ ಒಡ್ಡುತ್ತಲೇ ಇದೆ. ತಾಲಿಬಾನಿಗಳು ನಡೆಸುತ್ತಿರುವ ದೊಡ್ಡ ಪ್ರಮಾಣದ ದಾಳಿಗಳನ್ನು ಪಂಜ್ಶೀರ್ ಕಣಿವೆಯ ಹೋರಾಟಗಾರರು ಹಿಮ್ಮೆಟ್ಟಿಸುತ್ತಲೇ ಇದ್ದಾರೆ.</p>.<p>ರಾಷ್ಟ್ರೀಯ ಪ್ರತಿರೋಧ ಪಡೆಯ (ಎನ್ಆರ್ಎಫ್) ಹೋರಾಟಗಾರರು ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ಪ್ರತಿದಾಳಿಗಳನ್ನು ನಡೆಸುತ್ತಲೇ ಇದ್ದಾರೆ. ಪತನಗೊಂಡಿರುವ ಆಫ್ಗಾನ್ ಭದ್ರತಾ ಪಡೆ ಮತ್ತು ತಾಲಿಬಾನ್ ವಿರೋಧಿ ಹೋರಾಟಗಾರರು ಒಂದಾಗಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಸಂಘರ್ಷ ತೀವ್ರಗೊಳ್ಳುತ್ತಲೇ ಸಾಗಿದೆ.</p>.<p>ಪಂಜ್ಷಿರ್ ಬಿಕ್ಕಟ್ಟಿನ ಕುರಿತು ಟ್ವೀಟ್ ಮಾಡಿರುವ ಹಿರಿಯ ತಾಲಿಬಾನ್ ಅಧಿಕಾರಿ ಅಮೀರ್ ಖಾನ್, 'ನನ್ನ ಸಹೋದರರೇ, ಮಾತುಕತೆಯ ಮೂಲಕ ಪಂಜ್ಶೀರ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ, ದುರದೃಷ್ಟವಶಾತ್ ಎಲ್ಲವೂ ವ್ಯರ್ಥವಾಯಿತು' ಎಂದು ತಿಳಿಸಿದ್ದಾರೆ.</p>.<p>'ಈಗ ಮಾತುಕತೆ ವಿಫಲವಾಗಿದೆ ಮತ್ತು ಪಂಜ್ಷಿರ್ ಅನ್ನು ಮುಜಾಹಿದ್ದೀನ್ (ತಾಲಿಬಾನ್) ಸುತ್ತುವರೆದಿದ್ದಾನೆ. ಶಾಂತಿಯುತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಬಯಸದ ಜನರು ಇನ್ನೂ ಒಳಗಿದ್ದಾರೆ' ಎಂದು ಅವರು ಹೇಳಿದ್ದಾರೆ.</p>.<p>ಪತನಗೊಂಡ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬಿಸ್ಮಿಲ್ಲಾ ಮೊಹಮ್ಮದಿ ಅವರು 'ಪಂಜ್ಶೀರ್ ಮೇಲೆ ಮಂಗಳವಾರ ರಾತ್ರಿ ತಾಲಿಬಾನ್ ಮತ್ತೆ ದಾಳಿ ನಡೆಸಿದೆ' ಎಂದು ತಿಳಿಸಿದ್ದಾರೆ.</p>.<p>'ನಿನ್ನೆ(ಮಂಗಳವಾರ) ರಾತ್ರಿ ತಾಲಿಬಾನ್ ಭಯೋತ್ಪಾದಕರು ಪಂಜ್ಶೀರ್ ಮೇಲೆ ದಾಳಿ ಮಾಡಿದರು. ಆದರೆ, ಅವರು ಸೋತಿದ್ದಾರೆ' ಎಂದು ಮೊಹಮ್ಮದಿ ಬುಧವಾರ ಟ್ವೀಟ್ ಮಾಡಿದ್ದಾರೆ. ಈ ವೇಳೆ 34 ತಾಲಿಬಾನಿಗಳು ಮೃತಪಟ್ಟಿದ್ದು, 65 ಮಂದಿ ಗಾಯಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.</p>.<p>'ನಮ್ಮ ರಕ್ತದ ಕೊನೆಯ ಹನಿ ಇರುವ ತನಕ ನಾವು ಪಂಜ್ಶೀರ್ ಅನ್ನು ರಕ್ಷಿಸಲು ಸಿದ್ಧರಿದ್ದೇವೆ' ಎಂದು ಸುದ್ದಿಸಂಸ್ಥೆ ಎಎಫ್ಪಿಗೆ ಅಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾರೆ.</p>.<p>'ಪ್ರತಿಯೊಬ್ಬರ ಭುಜದ ಮೇಲೆ ಆಯುಧವಿದೆ ಮತ್ತು ಗುಂಡು ಹಾರಿಸಲು ಅದು ಸಿದ್ಧವಾಗಿದೆ" ಎಂದು ಇನ್ನೊಬ್ಬ ನಿವಾಸಿ ಹೇಳಿದ್ದಾರೆ.</p>.<p>'ರಷ್ಯನ್ನರ ಆಡಳಿತದಲ್ಲಿ, ಬ್ರಿಟಿಷರ ಆಡಳಿತದಲ್ಲಿ, ತಾಲಿಬಾನ್ನ ಹಿಂದಿನ ಆಡಳಿತದಲ್ಲಿ ಪಂಜ್ಶೀರ್ ಕಣಿವೆಯನ್ನು ರಕ್ಷಿಸಿಕೊಂಡಿದ್ದೇವೆ. ಅದನ್ನು ನಾವು ಮುಂದುವರಿಸುತ್ತೇವೆ' ಎಂದು ಹೋರಾಟಗಾರನೊಬ್ಬ ತಿಳಿಸಿದ್ದಾನೆ.</p>.<p>ಪಂಜ್ಶೀರ್ನ ಯುವ ಹೋರಾಟಗಾರ ಅಹಮ್ಮದ್ ಮಸೂದ್, ಸಾವಿರಾರು ಸ್ಥಳೀಯ ಯೋಧರನ್ನು ಸಜ್ಜುಗೊಳಿಸಿ ಕಣಿವೆಯನ್ನು ಕಾಯಲು ರಕ್ಷಣಾಪಡೆಯನ್ನು ಕಟ್ಟಿಕೊಂಡಿದ್ದಾರೆ.</p>.<p>1980ರ ದಶಕದಲ್ಲಿ ಸೋವಿಯತ್ ವಿರುದ್ಧದ ಹೋರಾಟ ಮತ್ತು 1990ರ ದಶಕದಲ್ಲಿ ತಾಲಿಬಾನ್ ವಿರುದ್ಧ ಹೋರಾಟದಲ್ಲಿ ಮಸೂದ್ ತಂದೆ ಮುಂಚೂಣಿಯಲ್ಲಿ ಇದ್ದರು. ಅವರನ್ನು ‘ಪಂಜ್ಶೀರ್ನ ಸಿಂಹ’ ಎಂದೇ ಕರೆಯುತ್ತಿದ್ದರು. 2001ರ ಸೆಪ್ಟೆಂಬರ್ 11ರ ದಾಳಿಗೆ (9/11) ಎರಡು ದಿನ ಮೊದಲು ಅವರನ್ನು ಅಲ್ಖೈದಾ ಹತ್ಯೆ ಮಾಡಿತ್ತು.</p>.<p><strong>ಇವನ್ನೂ</strong><strong>ಓದಿ<br />*</strong><a href="https://cms.prajavani.net/world-news/taliban-fire-in-the-air-to-control-crowd-at-kabul-airport-after-afghan-entry-860201.html" itemprop="url" target="_blank">ಅಫ್ಗನ್ ತೊರೆವ ಧಾವಂತ: 7 ಬಲಿ</a><br /><strong>*</strong><a href="https://cms.prajavani.net/world-news/ashraf-ghani-can-return-to-afghanistan-says-taliban-leader-khalil-haqqani-860205.html" itemprop="url" target="_blank">ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್</a><br /><strong>*</strong><a href="https://cms.prajavani.net/world-news/joe-biden-says-troops-withdrawal-from-afghanistan-was-a-logical-rational-and-right-decision-860208.html" itemprop="url" target="_blank">ಆಫ್ಗಾನ್ನಿಂದ ಸೇನೆ ಹಿಂತೆಗೆತ ತಾರ್ಕಿಕ ಮತ್ತು ಸರಿಯಾದ ನಿರ್ಧಾರ: ಬೈಡನ್</a><br /><strong>*</strong><a href="https://cms.prajavani.net/world-news/pakistan-intel-agency-played-key-role-in-taliban-takeover-of-afghanistan-says-us-congressman-860218.html" itemprop="url" target="_blank">ಅಫ್ಗಾನ್ ತಾಲಿಬಾನ್ ವಶವಾಗಲು ಪಾಕ್ ಗುಪ್ತಚರ ಸಂಸ್ಥೆ ಕೈವಾಡ: ಅಮೆರಿಕ ಸಂಸದ</a><br />*<a href="https://cms.prajavani.net/world-news/kabul-airlift-is-accelerating-but-still-hampered-by-chaos-us-joe-biden-860224.html" itemprop="url" target="_blank">ಕಾಬೂಲ್ನಿಂದ ಜನರ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ತ್ವರಿತ: ಜೋ ಬೈಡನ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>