ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಪಕ್ಸ ಸಹೋದರರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ಸುಬ್ರಮಣಿಯನ್‌

Last Updated 29 ಸೆಪ್ಟೆಂಬರ್ 2022, 16:18 IST
ಅಕ್ಷರ ಗಾತ್ರ

ಕೊಲಂಬೊ: ಬಿಜೆಪಿಯ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ಇಲ್ಲಿ ಗೋಟಬಯ ಸಹೋದರರನ್ನು ಭೇಟಿ ಮಾಡಿದರು.

ಶ್ರೀಲಂಕಾದಿಂದ ಪಲಾಯನ ಮಾಡಿ, ಕೊಲಂಬೊಗೆ ಹಿಂದಿರುಗಿದ ಬಳಿಕ ಮಾಜಿ ಅಧ್ಯಕ್ಷ ಗೋಟಬಯ ಅವರನ್ನು ಭೇಟಿ ಮಾಡಿದ ಮೊದಲ ವಿದೇಶಿ ಸಂದರ್ಶಕ ಸುಬ್ರಮಣಿಯನ್‌ ಅವರಾಗಿದ್ದಾರೆ.

ರಾಷ್ಟ್ರೀಯ ಭದ್ರತೆ ಕುರಿತು ಜನರಲ್ ಸರ್ ಜಾನ್ ಕೋಟೆಲಾವಾಲಾ ರಕ್ಷಣಾ ವಿಶ್ವವಿದ್ಯಾಲಯದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಕ್ಕೆ ಬಂದಿರುವ ಸುಬ್ರಮಣಿಯನ್‌ ಅವರು, ಬುಧವಾರ ಸಂಜೆ ಗೋಟಬಯ ಅವರ ತಮ್ಮ ಮಹಿಂದ ರಾಜಪಕ್ಸ ಅವರನ್ನು ಭೇಟಿಯಾಗಿ, ಅವರ ನಿವಾಸದಲ್ಲಿ ನಡೆಯುತ್ತಿದ್ದ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡರು ಎಂದು ಗುರುವಾರ ಮೂಲಗಳು ತಿಳಿಸಿವೆ.

‘ರಾಜಪಕ್ಸ ಸಹೋದರರ ಆಪ್ತ ಸ್ನೇಹಿತರಾದ ಸುಬ್ರಮಣಿಯನ್‌, ಬುಧವಾರ ರಾತ್ರಿ ಮಹಿಂದ ರಾಜಪಕ್ಸ ಅವರ ಅಧಿಕೃತ ನಿವಾಸದಲ್ಲಿ ನಡೆದ ನವರಾತ್ರಿ ಪೂಜೆಯಲ್ಲಿ ಭಾಗಿಯಾಗಿ, ಗುರುವಾರ ಬೆಳಿಗ್ಗೆ ಗೋಟಬಯ ರಾಜಪಕ್ಸ ಅವರನ್ನು ಭೇಟಿಯಾಗಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT