ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಆರ್. ಮಧುಸೂದನ್, ‘ಅಫ್ಗಾನಿಸ್ತಾನವನ್ನು ಸ್ವಾವಲಂಬಿ ದೇಶವನ್ನಾಗಿಸುವ ದೃಷ್ಟಿಯಿಂದ ಅಲ್ಲಿನ ಎಲ್ಲಾ 34 ಪ್ರಾಂತ್ಯಗಳ ಜನ ಕೇಂದ್ರಿತ ಯೋಜನೆಗಳಲ್ಲಿ ಭಾರತದ ಅಭಿವೃದ್ಧಿ ಪಾಲುದಾರಿಕೆ ಇತ್ತು ಮತ್ತು ಅಲ್ಲಿಗೆ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ವಾಯುಮಾರ್ಗದ ಮೂಲಕ ಸರಕು ಸಾಗಣೆಗಾಗಿ ಕಾರಿಡಾರ್ ಮತ್ತು ಚಬಾಹರ್ ಬಂದರನ್ನು ಕಾರ್ಯಗತಗೊಳಿಸಿತ್ತು’ ಎಂದಿದ್ದಾರೆ.