ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಇದೊಂದು ಭಯಾನಕ ಘಟನೆ. ಯಾವುದೇ ಪ್ರತಿಮೆ ಅಥವಾ ಸ್ಮಾರಕವನ್ನು ವಿರೂಪ ಅಥವಾ ಅಪವಿತ್ರಗೊಳಿಸಬಾರದು. ಗಾಂಧೀಜಿ ಮಾತ್ರವಲ್ಲ, ಅಮೆರಿಕ ಪ್ರತಿಪಾದಿಸುವ ಶಾಂತಿ, ಸೌಹಾರ್ದ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಯಾವುದೇ ವ್ಯಕ್ತಿಗಳ ಪ್ರತಿಮೆಗಳನ್ನು ಅಗೌರವಿಸಬಾರದು‘ ಎಂದರು.