<p><strong>ಕೊಲಂಬೊ:</strong> ಶ್ರೀಲಂಕಾದ ಮೀನುಗಾರರ ಮೇಲೆ ಭಾರತೀಯ ನೌಕಾಪಡೆಯು ಹಲ್ಲೆ ನಡೆಸಿದೆ ಎಂಬ ಸ್ಥಳೀಯ ಮಾಧ್ಯಮಗಳ ವರದಿಗಳನ್ನು ಭಾರತ ನಿರಾಕರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಹೈಕಮಿಷನ್, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.</p>.<p>ಜೂನ್ 4ರಂದು ಶ್ರೀಲಂಕಾದ 13 ಮೀನುಗಾರರ ಮೇಲೆ ಅಂತರರಾಷ್ಟ್ರೀಯ ಸಾಗರ ಮಟ್ಟದಲ್ಲಿ ಭಾರತೀಯ ನೌಕಪಡೆಯು ದೈಹಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿತ್ತು.</p>.<p>ಇದನ್ನೂ ಓದಿ:<a href="https://www.prajavani.net/world-news/sri-lanka-detects-first-community-case-of-delta-variant-of-coronavirus-839980.html" itemprop="url">ಶ್ರೀಲಂಕಾ: ಮೊದಲ ಬಾರಿ ಕೊರೊನಾ ವೈರಸ್ ‘ಡೆಲ್ಟಾ’ ತಳಿ ಪತ್ತೆ </a></p>.<p>'ನಾವು ಮೀನುಗಾರರು ಎಂದು ಹೇಳಿದ ಹೊರತಾಗಿಯೂ ಅವರು ನಮ್ಮಿಂದ ಮಾದಕ ವಸ್ತುಗಳಿಗಾಗಿ ಬೇಡಿಕೆಯಿಟ್ಟರು' ಎಂದು ಶ್ರೀಲಂಕಾದ ಸ್ಥಳೀಯ 'ಹೀರು' ಟಿವಿಗೆ ನೀಡಿದ ಸಂದರ್ಶನದಲ್ಲಿ ಮೀನುಗಾರರಿಬ್ಬರು ದೂರಿದ್ದಾರೆ.</p>.<p>ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಹೈಕಮಿಷನ್, ಶ್ರೀಲಂಕಾದ ಮೀನುಗಾರರ ಗುಂಪಿನ ಮೇಲೆ ಭಾರತೀಯ ನೌಕಾಪಡೆಯು ದೈಹಿಕವಾಗಿ ಹಲ್ಲೆ ನಡೆಸಿದೆ ಎಂಬುದಕ್ಕೆ ಸಂಬಂಧಿಸಿದಂತೆ ಜೂನ್ 17ರಂದು ಪ್ರಸಾರವಾಗಿರುವ ಮಾಧ್ಯಮ ವರದಿಗಳು ಸುಳ್ಳಾಗಿದ್ದು, ಅಂತಹ ಯಾವುದೇ ಘಟನೆಯು ನಡೆದಿಲ್ಲ ಎಂದು ತಿಳಿಸಿದೆ.</p>.<p>ಭಾರತೀಯ ನೌಕಾಪಡೆಯು ಶಿಸ್ತುಬದ್ಧ ಮತ್ತು ವೃತ್ತಿಪರ ಪಡೆಯಾಗಿದ್ದು, ತನ್ನ ಜವಾಬ್ದಾರಿಯನ್ನು ನಿಷ್ಪಕ್ಷ ರೀತಿಯಲ್ಲಿ ನಿರ್ವಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.</p>.<p>ಸ್ಥಾಪಿತ ದ್ವಿಪಕ್ಷೀಯ ಬಾಂಧವ್ಯ ಹಾಗೂ ತಿಳುವಳಿಕೆಯ ಮೂಲಕ ಭಾರತ ಹಾಗೂ ಶ್ರೀಲಂಕಾ ನಡುವಣ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಮಾನವೀಯ ರೀತಿಯಲ್ಲಿ ಬಗೆಹರಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದೆ.</p>.<p>ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಇಂದು ರತ್ನಾಯಕೆ, ತನಿಖೆ ನಡೆಸಿದ ಬಳಿಕ ಭಾರತದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.</p>.<p>ಕಳೆದ ವರ್ಷ ಇದಕ್ಕೆ ಸಮಾನವಾದ ರೀತಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಆಕ್ರಮಿಸಿದೆ ಎಂದು ಆರೋಪಿಸಲಾಗಿತ್ತು.</p>.<p>ಹೊಸ ವರ್ಷಾರಂಭದಲ್ಲಿ ಶ್ರೀಲಂಕಾ ಭೇಟಿ ವೇಳೆ ಅಲ್ಲಿನ ಮೀನುಗಾರಿಕಾ ಸಚಿವ ಡೌಗ್ಲಾಸ್ ದೇವಾನಂದ ಭೇಟಿ ಮಾಡಿದ್ದ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮೀನುಗಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಆಗ್ರಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ:</strong> ಶ್ರೀಲಂಕಾದ ಮೀನುಗಾರರ ಮೇಲೆ ಭಾರತೀಯ ನೌಕಾಪಡೆಯು ಹಲ್ಲೆ ನಡೆಸಿದೆ ಎಂಬ ಸ್ಥಳೀಯ ಮಾಧ್ಯಮಗಳ ವರದಿಗಳನ್ನು ಭಾರತ ನಿರಾಕರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಹೈಕಮಿಷನ್, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.</p>.<p>ಜೂನ್ 4ರಂದು ಶ್ರೀಲಂಕಾದ 13 ಮೀನುಗಾರರ ಮೇಲೆ ಅಂತರರಾಷ್ಟ್ರೀಯ ಸಾಗರ ಮಟ್ಟದಲ್ಲಿ ಭಾರತೀಯ ನೌಕಪಡೆಯು ದೈಹಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿತ್ತು.</p>.<p>ಇದನ್ನೂ ಓದಿ:<a href="https://www.prajavani.net/world-news/sri-lanka-detects-first-community-case-of-delta-variant-of-coronavirus-839980.html" itemprop="url">ಶ್ರೀಲಂಕಾ: ಮೊದಲ ಬಾರಿ ಕೊರೊನಾ ವೈರಸ್ ‘ಡೆಲ್ಟಾ’ ತಳಿ ಪತ್ತೆ </a></p>.<p>'ನಾವು ಮೀನುಗಾರರು ಎಂದು ಹೇಳಿದ ಹೊರತಾಗಿಯೂ ಅವರು ನಮ್ಮಿಂದ ಮಾದಕ ವಸ್ತುಗಳಿಗಾಗಿ ಬೇಡಿಕೆಯಿಟ್ಟರು' ಎಂದು ಶ್ರೀಲಂಕಾದ ಸ್ಥಳೀಯ 'ಹೀರು' ಟಿವಿಗೆ ನೀಡಿದ ಸಂದರ್ಶನದಲ್ಲಿ ಮೀನುಗಾರರಿಬ್ಬರು ದೂರಿದ್ದಾರೆ.</p>.<p>ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಹೈಕಮಿಷನ್, ಶ್ರೀಲಂಕಾದ ಮೀನುಗಾರರ ಗುಂಪಿನ ಮೇಲೆ ಭಾರತೀಯ ನೌಕಾಪಡೆಯು ದೈಹಿಕವಾಗಿ ಹಲ್ಲೆ ನಡೆಸಿದೆ ಎಂಬುದಕ್ಕೆ ಸಂಬಂಧಿಸಿದಂತೆ ಜೂನ್ 17ರಂದು ಪ್ರಸಾರವಾಗಿರುವ ಮಾಧ್ಯಮ ವರದಿಗಳು ಸುಳ್ಳಾಗಿದ್ದು, ಅಂತಹ ಯಾವುದೇ ಘಟನೆಯು ನಡೆದಿಲ್ಲ ಎಂದು ತಿಳಿಸಿದೆ.</p>.<p>ಭಾರತೀಯ ನೌಕಾಪಡೆಯು ಶಿಸ್ತುಬದ್ಧ ಮತ್ತು ವೃತ್ತಿಪರ ಪಡೆಯಾಗಿದ್ದು, ತನ್ನ ಜವಾಬ್ದಾರಿಯನ್ನು ನಿಷ್ಪಕ್ಷ ರೀತಿಯಲ್ಲಿ ನಿರ್ವಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.</p>.<p>ಸ್ಥಾಪಿತ ದ್ವಿಪಕ್ಷೀಯ ಬಾಂಧವ್ಯ ಹಾಗೂ ತಿಳುವಳಿಕೆಯ ಮೂಲಕ ಭಾರತ ಹಾಗೂ ಶ್ರೀಲಂಕಾ ನಡುವಣ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಮಾನವೀಯ ರೀತಿಯಲ್ಲಿ ಬಗೆಹರಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದೆ.</p>.<p>ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಇಂದು ರತ್ನಾಯಕೆ, ತನಿಖೆ ನಡೆಸಿದ ಬಳಿಕ ಭಾರತದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.</p>.<p>ಕಳೆದ ವರ್ಷ ಇದಕ್ಕೆ ಸಮಾನವಾದ ರೀತಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಆಕ್ರಮಿಸಿದೆ ಎಂದು ಆರೋಪಿಸಲಾಗಿತ್ತು.</p>.<p>ಹೊಸ ವರ್ಷಾರಂಭದಲ್ಲಿ ಶ್ರೀಲಂಕಾ ಭೇಟಿ ವೇಳೆ ಅಲ್ಲಿನ ಮೀನುಗಾರಿಕಾ ಸಚಿವ ಡೌಗ್ಲಾಸ್ ದೇವಾನಂದ ಭೇಟಿ ಮಾಡಿದ್ದ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮೀನುಗಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಆಗ್ರಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>