ದುಬೈ: ಮಸ್ಕತ್ನಲ್ಲಿರುವ ತನ್ನಅಪಾರ್ಟ್ಮೆಂಟ್ನಲ್ಲಿ ಭಾರತ ಸಂಜಾತ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಒಮನ್ ಪೊಲೀಸರು ತಿಳಿಸಿದ್ದಾರೆ.
‘ರುವಿ ಪ್ರದೇಶದ ಹೊಂಡಾ ರಸ್ತೆಯಲ್ಲಿರುವ ಅರ್ಪಾಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಗ್ರಾಫಿಕ್ ಡಿಸೈನರ್ ಉನ್ನಿ ಕೃಷ್ಣನ್(50) ಅವರ ಮೃತ ಶರೀರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಒಮನ್ನ ಭಾರತೀಯ ಸಾಂಸ್ಕೃತಿಕ ಸಮುದಾಯದ ಸದಸ್ಯರಾಗಿದ್ದರು’ ಎಂದು ಆರ್ಪಿಒ ಅಧಿಕಾರಿಗಳು ತಿಳಿಸಿದರು.
‘ಮೃತಶರೀರವನ್ನು ಪೊಲೀಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ತನಿಖೆಯನ್ನು ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.