ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೊನ್ ಅವರು ಇತ್ತೀಚೆಗೆ ಬೇರೂತ್ಗೆ ಭೇಟಿ ನೀಡಿ, ಸ್ಫೋಟದಿಂದ ತೀವ್ರವಾಗಿ ಹಾನಿಗೊಳಗಾಗಿರುವ ಪ್ರದೇಶಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಈ ವೇಳೆ ’ದಶಕಗಳಿಂದ ಇಲ್ಲಿ ನಡೆಯುತ್ತಿರುವ ಭ್ರಷ್ಟರಾಜಕೀಯವನ್ನು ಕೊನೆಗೊಳಿಸಿ’ ಎಂದು ಜನರು ಒತ್ತಾಯಿಸಿದ್ದರು. ಮ್ಯಾಕ್ರೊನ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಮೌಸವಿ, ’ಕೆಲವರು ಈ ಪ್ರಕರಣವನ್ನು ಸ್ವ ಹಿತಾಸಕ್ತಿಗಾಗಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದಷ್ಟೇ ಹೇಳಿದರು.