<p><strong>ವಿಶ್ವಸಂಸ್ಥೆ</strong>: ಶ್ರೀಲಂಕಾದಲ್ಲಿ ಸಂಘರ್ಷದ ಮೂಲ ಕಾರಣಗಳು ಮತ್ತು ಪ್ರತಿಭಟನಾಕಾರರ ಕುಂದುಕೊರತೆಗಳನ್ನು ಪರಿಹರಿಸುವುದು ಮುಖ್ಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.</p>.<p>ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಸ್ಥಿತ್ಯಂತರಕ್ಕಾಗಿ ರಾಜಿ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ನಾನು ಎಲ್ಲಾ ಪಕ್ಷದ ನಾಯಕರನ್ನು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾ ಪರಿಸ್ಥಿತಿ ಬಗ್ಗೆ ನಿತ್ಯ ಅವಲೋಕನ ಮಾಡುವುದಾಗಿಯೂ ಟ್ವೀಟ್ ಮಾಡಿದ್ದಾರೆ.</p>.<p>ಸದ್ಯ, ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ಮೂಲಕ ಸಿಂಗಪುರಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.</p>.<p>ಹಂಗಾಮಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಪದಚ್ಯುತಿಗೂ ಒತ್ತಡ ಹೆಚ್ಚಾಗುತ್ತಿದೆ. ಈ ಮಧ್ಯೆ, ಆಡಳಿತ ಮತ್ತು ವಿಪಕ್ಷಗಳು ಒಪ್ಪುವ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡುವಂತೆ ಸ್ಪೀಕರ್ಗೆ ರಾನಿಲ್ ಸೂಚನೆ ನೀಡಿದ್ದಾರೆ.</p>.<p>ಗೊಟಬಯ ದೇಶ ಬಿಟ್ಟು ತೆರಳಿರುವ ಸೂಚನೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗಿದ್ದು, ಹೋರಾಟ ಮತ್ತಷ್ಟು ತೀವ್ರಗೊಂಡಿದೆ.</p>.<p><a href="https://www.prajavani.net/world-news/sri-lankas-acting-president-wickremesinghe-asks-speaker-to-nominate-pm-who-is-acceptable-to-all-954216.html" itemprop="url">ಆಡಳಿತ, ವಿಪಕ್ಷಗಳು ಒಪ್ಪುವ ವ್ಯಕ್ತಿಗೆ ಶ್ರೀಲಂಕಾ ಪ್ರಧಾನಿ ಗಾದಿ: ರಾನಿಲ್ ಸೂಚನೆ </a></p>.<p><a href="https://www.prajavani.net/world-news/sri-lanka-crisis-intensifies-pressure-mounts-on-ranils-resignation-954194.html" itemprop="url">ಶ್ರೀಲಂಕಾದಲ್ಲಿ ಬಿಕ್ಕಟ್ಟು ತೀವ್ರ: ರಾನಿಲ್ ರಾಜೀನಾಮೆಗೆ ಒತ್ತಡ </a></p>.<p><a href="https://www.prajavani.net/world-news/president-gotabaya-rajapaksa-flees-sri-lanka-amid-public-revolt-954144.html" itemprop="url">ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ: ಅಧ್ಯಕ್ಷ ಪರಾರಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ</strong>: ಶ್ರೀಲಂಕಾದಲ್ಲಿ ಸಂಘರ್ಷದ ಮೂಲ ಕಾರಣಗಳು ಮತ್ತು ಪ್ರತಿಭಟನಾಕಾರರ ಕುಂದುಕೊರತೆಗಳನ್ನು ಪರಿಹರಿಸುವುದು ಮುಖ್ಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.</p>.<p>ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಸ್ಥಿತ್ಯಂತರಕ್ಕಾಗಿ ರಾಜಿ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ನಾನು ಎಲ್ಲಾ ಪಕ್ಷದ ನಾಯಕರನ್ನು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾ ಪರಿಸ್ಥಿತಿ ಬಗ್ಗೆ ನಿತ್ಯ ಅವಲೋಕನ ಮಾಡುವುದಾಗಿಯೂ ಟ್ವೀಟ್ ಮಾಡಿದ್ದಾರೆ.</p>.<p>ಸದ್ಯ, ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ಮೂಲಕ ಸಿಂಗಪುರಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.</p>.<p>ಹಂಗಾಮಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಪದಚ್ಯುತಿಗೂ ಒತ್ತಡ ಹೆಚ್ಚಾಗುತ್ತಿದೆ. ಈ ಮಧ್ಯೆ, ಆಡಳಿತ ಮತ್ತು ವಿಪಕ್ಷಗಳು ಒಪ್ಪುವ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡುವಂತೆ ಸ್ಪೀಕರ್ಗೆ ರಾನಿಲ್ ಸೂಚನೆ ನೀಡಿದ್ದಾರೆ.</p>.<p>ಗೊಟಬಯ ದೇಶ ಬಿಟ್ಟು ತೆರಳಿರುವ ಸೂಚನೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗಿದ್ದು, ಹೋರಾಟ ಮತ್ತಷ್ಟು ತೀವ್ರಗೊಂಡಿದೆ.</p>.<p><a href="https://www.prajavani.net/world-news/sri-lankas-acting-president-wickremesinghe-asks-speaker-to-nominate-pm-who-is-acceptable-to-all-954216.html" itemprop="url">ಆಡಳಿತ, ವಿಪಕ್ಷಗಳು ಒಪ್ಪುವ ವ್ಯಕ್ತಿಗೆ ಶ್ರೀಲಂಕಾ ಪ್ರಧಾನಿ ಗಾದಿ: ರಾನಿಲ್ ಸೂಚನೆ </a></p>.<p><a href="https://www.prajavani.net/world-news/sri-lanka-crisis-intensifies-pressure-mounts-on-ranils-resignation-954194.html" itemprop="url">ಶ್ರೀಲಂಕಾದಲ್ಲಿ ಬಿಕ್ಕಟ್ಟು ತೀವ್ರ: ರಾನಿಲ್ ರಾಜೀನಾಮೆಗೆ ಒತ್ತಡ </a></p>.<p><a href="https://www.prajavani.net/world-news/president-gotabaya-rajapaksa-flees-sri-lanka-amid-public-revolt-954144.html" itemprop="url">ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ: ಅಧ್ಯಕ್ಷ ಪರಾರಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>