2010ರಲ್ಲಿ ನಡೆದಿದ್ದ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಚುನಾವಣೆಯಲ್ಲಿ ಕಮಲಾ ಸ್ಪರ್ಧಿಸಿದ್ದರು. ಈ ವೇಳೆ ಚೆನ್ನೈನಲ್ಲಿ ನೆಲೆಸಿರುವ ಚಿಕ್ಕಮ್ಮ (ತಾಯಿಯ ಸಹೋದರಿ) ಸರಳಾ ಅವರಿಗೆ ದೂರವಾಣಿ ಕರೆ ಮಾಡಿದ್ದ ಅವರು ತನಗೆ ಒಳ್ಳೆಯದಾಗಬೇಕು. ಇದಕ್ಕಾಗಿ ಬೆಸೆಂಟ್ ನಗರದಲ್ಲಿರುವ ಹಿಂದೂ ದೇಗುಲದಲ್ಲಿ ಪೂಜೆ ಮಾಡುವಂತೆ ಹೇಳಿದ್ದರು. ಕಮಲಾ ಅಣತಿಯಂತೆ ಸರಳಾ ಅವರು ಹಿಂದೂ ಸಂಪ್ರದಾಯದ ಪ್ರಕಾರ 101 ತೆಂಗಿನ ಕಾಯಿಗಳನ್ನು ಒಡೆದಿದ್ದರು.