<p><strong>ಢಾಕಾ: </strong>ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ದುರ್ಗಾ ಪೂಜೆಯ ವೇಳೆ ಹಿಂದೂಗಳ ಮೇಲೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.</p>.<p>ಇಕ್ಬಾಲ್ ಹುಸ್ಸೇನ್(35) ಬಂಧಿತ ವ್ಯಕ್ತಿ. ಈತನನ್ನು ಗುರುವಾರ ರಾತ್ರಿ ಕಾಕ್ಸ್ ಬಜಾರ್ ಬೀಚ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಕೊಮಿಲ್ಲಾ ಜಿಲ್ಲೆಯಲ್ಲಿ ನಡೆದ ದುರ್ಗಾ ಪೂಜೆ ವೇಳೆ ಪೆಂಡಾಲ್ನಲ್ಲಿದ್ದ ಹನುಮಂತನ ಮೂರ್ತಿಯ ಪಾದದ ಬಳಿಮುಸ್ಲಿಮರ ಪವಿತ್ರ ಗ್ರಂಥ ಕುರ್–ಆನ್ ಪ್ರತಿ ಇರಿಸಿದ ಆರೋಪಿಗಳಲ್ಲಿ ಬಂಧಿತ ಇಕ್ಬಾಲ್ ಕೂಡ ಒಬ್ಬ ಎಂದು ಶಂಕಿಸಲಾಗಿದೆ ಎಂದು ಬಿಡಿನ್ಯೂಸ್24.ಕಾಮ್ ವರದಿ ಮಾಡಿದೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಫಿಕ್ ಉಲ್ಲಾ ಇಸ್ಲಾಮ್ ಅವರು ಇಕ್ಬಾಲ್ ಹುಸ್ಸೇನ್ನನ್ನು ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ಕಾಕ್ಸ್ ಬಜಾರ್ ಬೀಚ್ ಪ್ರದೇಶದಲ್ಲಿ ಬಂದಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಈ ವಿಷಯವನ್ನು ಗೃಹ ಸಚಿವ ಅಸಾದುಝಮನ್ ಖಾನ್ ಕಮಲ್ ಕೂಡ ಖಚಿತಪಡಿಸಿದ್ದಾರೆ.</p>.<p><a href="https://www.prajavani.net/world-news/protesters-in-bangladesh-demand-law-to-protect-minorities-as-they-condemn-violence-against-hindus-877036.html" itemprop="url">ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ: ಶಿಕ್ಷಣ ತಜ್ಞರ ಖಂಡನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ: </strong>ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ದುರ್ಗಾ ಪೂಜೆಯ ವೇಳೆ ಹಿಂದೂಗಳ ಮೇಲೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.</p>.<p>ಇಕ್ಬಾಲ್ ಹುಸ್ಸೇನ್(35) ಬಂಧಿತ ವ್ಯಕ್ತಿ. ಈತನನ್ನು ಗುರುವಾರ ರಾತ್ರಿ ಕಾಕ್ಸ್ ಬಜಾರ್ ಬೀಚ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಕೊಮಿಲ್ಲಾ ಜಿಲ್ಲೆಯಲ್ಲಿ ನಡೆದ ದುರ್ಗಾ ಪೂಜೆ ವೇಳೆ ಪೆಂಡಾಲ್ನಲ್ಲಿದ್ದ ಹನುಮಂತನ ಮೂರ್ತಿಯ ಪಾದದ ಬಳಿಮುಸ್ಲಿಮರ ಪವಿತ್ರ ಗ್ರಂಥ ಕುರ್–ಆನ್ ಪ್ರತಿ ಇರಿಸಿದ ಆರೋಪಿಗಳಲ್ಲಿ ಬಂಧಿತ ಇಕ್ಬಾಲ್ ಕೂಡ ಒಬ್ಬ ಎಂದು ಶಂಕಿಸಲಾಗಿದೆ ಎಂದು ಬಿಡಿನ್ಯೂಸ್24.ಕಾಮ್ ವರದಿ ಮಾಡಿದೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಫಿಕ್ ಉಲ್ಲಾ ಇಸ್ಲಾಮ್ ಅವರು ಇಕ್ಬಾಲ್ ಹುಸ್ಸೇನ್ನನ್ನು ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ಕಾಕ್ಸ್ ಬಜಾರ್ ಬೀಚ್ ಪ್ರದೇಶದಲ್ಲಿ ಬಂದಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಈ ವಿಷಯವನ್ನು ಗೃಹ ಸಚಿವ ಅಸಾದುಝಮನ್ ಖಾನ್ ಕಮಲ್ ಕೂಡ ಖಚಿತಪಡಿಸಿದ್ದಾರೆ.</p>.<p><a href="https://www.prajavani.net/world-news/protesters-in-bangladesh-demand-law-to-protect-minorities-as-they-condemn-violence-against-hindus-877036.html" itemprop="url">ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ: ಶಿಕ್ಷಣ ತಜ್ಞರ ಖಂಡನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>