ಗಲ್ಫ್ ರಾಷ್ಟ್ರಗಳ ಭಾರತದ ರಾಯಭಾರಿಗಳೊಂದಿಗೆ ಜೈಶಂಕರ್ ಸಭೆ

ಕುವೈತ್ ಸಿಟಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗಲ್ಪ್ ರಾಷ್ಟ್ರಗಳ ಭಾರತದ ರಾಯಭಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಿಮಾನಯಾನ ಶ್ರೀಘ್ರವಾಗಿ ಪುನರಾರಂಭಿಸುವುದು, ಕೋವಿಡ್ನಿಂದಾಗಿ ಬೇರ್ಪಟ್ಟ ಕುಟುಂಬಗಳನ್ನು ಮತ್ತೆ ಒಗ್ಗೂಡಿಸಲು ನೆರವಾಗುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ತೈಲ ಸಮೃದ್ಧ ಕೊಲ್ಲಿ ರಾಷ್ಟ್ರಕ್ಕೆ ತನ್ನ ಚೊಚ್ಚಲ ಭೇಟಿ ನೀಡಿರುವ ಜೈಶಂಕರ್, ಕುವೈತ್ನಲ್ಲಿರುವ ಭಾರತದ ರಾಯಭಾರ ಕಚೇರಿ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಬಳಿಕ ಈ ಕುರಿತು ಟ್ವೀಟ್ ಮಾಡಿರುವ ಜೈಶಂಕರ್, 'ಸೌದಿ ಅರೇಬಿಯಾ, ಯುಎಇ, ಇರಾನ್, ಕುವೈತ್, ಒಮಾನ್, ಕತಾರ್ ಮತ್ತು ಬಹ್ರೇನ್ನಲ್ಲಿರುವ ಭಾರತದ ರಾಯಭಾರಿಗಳೊಂದಿಗೆ ಫಲಪ್ರದ ಚರ್ಚೆಗೆ ಅಧ್ಯಕ್ಷತೆ ವಹಿಸಲಾಗಿದೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಳ–ಅಗಲ: ಭಾರತೀಯ ಅಮೆರಿಕನ್ನರಿಗೆ ತಾರತಮ್ಯದ ಕಿರಿಕಿರಿ
ಭಾರತೀಯ ಸಮುದಾಯ ಕಲ್ಯಾಣವನ್ನು ಖಾತ್ರಿಪಡಿಸುವುದು, ಕೋವಿಡ್ನಿಂದಾಗಿ ಬೇರ್ಪಟ್ಟ ಕುಟುಂಬಗಳನ್ನು ಒಗ್ಗೂಡಿಸುವುದು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಗಲ್ಫ್ ಬಿಟ್ಟು ತೆರಳಿರುವ ಭಾರತೀಯ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಶೀಘ್ರವಾಗಿ ಹಿಂದಿರುಗಿಸಲು ಮಧ್ಯಸ್ಥಿಕೆ ವಹಿಸುವುದು, ಅನಿವಾಸಿ ಭಾರತೀಯರಿಗೆ (ಎನ್ಆರ್ಐ) ಸಹಾಯ ಮಾಡಲು ವಿಮಾನಯಾನ ಶೀಘ್ರವಾಗಿ ಪುನರಾರಂಭಿಸುವುದು ಮತ್ತು ಆರ್ಥಿಕ ಚೇತರಿಕೆಗಾಗಿ ಶೀಘ್ರದಲ್ಲೇ ವ್ಯಾಪಾರ ಬಲಗೊಳಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸರಣಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
Chaired a fruitful meeting of Indian Ambassadors in Saudi Arabia, UAE, Iran, Kuwait, Oman, Qatar and Bahrain today. Discussions focused on:
1. Ensuring utmost welfare of the Indian community in respective jurisdictions. pic.twitter.com/LvfoPACso5
— Dr. S. Jaishankar (@DrSJaishankar) June 10, 2021
ಇದಕ್ಕೂ ಮೊದಲು ಕುವೈತ್ ವಿದೇಶಾಂಗ ಸಚಿವ ಶೇಕ್ ಅಹ್ಮದ್ ನಾಸರ್ ಅಲ್-ಮೊಹಮ್ಮದ್ ಅಲ್-ಸಬಾ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದರು. ಆರೋಗ್ಯ, ಆಹಾರ, ಶಿಕ್ಷಣ, ಶಕ್ತಿ, ಡಿಜಿಟಲ್ ಮತ್ತು ವಾಣಿಜ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಕುವೈತ್ನಲ್ಲಿ ಭಾರತೀಯ ಕಾರ್ಮಿಕರಿಗೆ ಹೆಚ್ಚಿನ ಕಾನೂನು ರಕ್ಷಣೆ ನೀಡುವ ಒಪ್ಪಂದಕ್ಕೆ (ಎಂಒಯು)ಸಹಿ ಹಾಕಲಾಯಿತು.
ಕುವೈತ್ನಲ್ಲಿ 10 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಕುವೈತ್ನ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತಕ್ಕೆ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಕುವೈತ್ ಸೇರಿದೆ.
ಇದನ್ನೂ ಓದಿ: ಬಡ ರಾಷ್ಟ್ರಗಳಿಗೆ ಫೈಜರ್ ಲಸಿಕೆಯ 50 ಕೋಟಿ ಡೋಸ್ ದೇಣಿಗೆ: ಬೈಡನ್ ನಿರ್ಧಾರ
2021-22ನೇ ವರ್ಷವು ಭಾರತ-ಕುವೈತ್ ನಡುವಣ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವರ್ಷಾಚರಣೆಯನ್ನು ಆಚರಿಸಲಾಗುತ್ತಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿ ಸಂದೇಶವನ್ನು ಜೈಶಂಕರ್ ತಲುಪಿದ್ದಾರೆ.
Honored to unveil the bust of Mahatma Gandhi at @indembkwt. Joined by all the Indian Ambassadors of the Gulf region on this notable occasion. pic.twitter.com/IjbzMcujGY
— Dr. S. Jaishankar (@DrSJaishankar) June 10, 2021
ಭಾರತದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿಕೊಂಡಿರುವ ಕುವೈತ್, ಕಳೆದ ಕೆಲವು ವಾರಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ಭಾರತೀಯ ನೌಕಾಪಡೆಯು ಕುವೈತ್ನಿಂದ ಆಮ್ಲಜನಕವನ್ನು ತಂದಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.