<p><strong>ಕೊಲಂಬೊ</strong>: ಮಾನವ-ಆನೆ ಸಂಘರ್ಷದಿಂದಾಗಿ ಶ್ರೀಲಂಕಾ, ವಿಶ್ವದಲ್ಲೇ ಅತಿ ಹೆಚ್ಚು ಆನೆಗಳ ಸಾವುಗಳನ್ನು ದಾಖಲಿಸಿರುವ ರಾಷ್ಟ್ರವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.</p>.<p>ಇತ್ತೀಚೆಗೆ ನಡೆದ ದ್ವೀಪರಾಷ್ಟ್ರದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಕೊಪಾ) ಸಭೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಇದರ ಜತೆಗೆ, ಈ ಸಂಘರ್ಷದಲ್ಲಿ ಮಾನವನ ಸಾವಿನ ಸಂಖ್ಯೆಯಲ್ಲಿ ಜಾಗತಿಕವಾಗಿ ಭಾರತದ ನಂತರ ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ ಎಂದು ಡೈಲಿ ನ್ಯೂಸ್ ವರದಿ ಮಾಡಿದೆ.</p>.<p>ಈ ಹಿನ್ನೆಲೆಯಲ್ಲಿ ಖ್ಯಾತ ಆನೆ ತಜ್ಞ, ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಪೃಥ್ವಿರಜ್ ಫರ್ನಾಂಡೊ ಅವರಿಂದ ಮಾನವ–ಆನೆ ಸಂಘರ್ಷದ ಬಗ್ಗೆ ವಿಶೇಷವಾಗಿ ಆಡಿಟ್ ಮಾಡಿಸುವಂತೆ ‘ಕೊಪಾ‘ ಆದೇಶಿಸಿದೆ.</p>.<p>ಸಿಒಪಿಇ (ಕೊಪೆ) ಸಮಿತಿ ಅಧ್ಯಕ್ಷ ತಿಸ್ಸಾ ವಿತರಣಾ ‘ಶ್ರೀಲಂಕಾದಲ್ಲಿ ಕಳೆದ 12 ತಿಂಗಳಿಂದ ನಡೆದಿರುವ ಮಾನವ– ಆನೆ ಸಂಘರ್ಷದಲ್ಲಿ ಒಟ್ಟು 407 ಆನೆಗಳು ಸಾವನ್ನಪ್ಪಿವೆ. ಕಳೆದ ವರ್ಷದ 272 ಆನೆಗಳು ಸಾವನ್ನಪ್ಪಿದ್ದವು. ಈ ವರ್ಷ ಆನೆಯ ದಾಳಿಯಿಂದ ಸತ್ತ ಮನುಷ್ಯರ ಸಂಖ್ಯೆ 85. ಕಳೆದ ವರ್ಷ 122 ಮಂದಿ ಸಾವನ್ನಪ್ಪಿದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಆನೆಗಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಮನುಷ್ಯರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ‘ ಎಂದು ಹೇಳಿದ್ದಾರೆ.</p>.<p>ವಿತರಣಾ ಮತ್ತು ಇತರ ಸದಸ್ಯರು, ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಾನವ– ಆನೆ ಸಂಘರ್ಷ ನಿಯಂತ್ರಿಸುವುದಕ್ಕಾಗಿ ವನ್ಯಜೀವಿ ವಿಭಾಗ ಹಾಗೂ ಇನ್ನಿತರ ಸೂಕ್ತ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಿ ಹೇಳಿದರು. ಈ ಸಂಘರ್ಷವನ್ನು ತಡೆಯುವುದಕ್ಕಾಗಿ ಪರಿಣಾಮಕಾರಿಯಾದ ಕಾರ್ಯಕ್ರಮವನ್ನು ರೂಪಿಸಬೇಕೆಂದು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ</strong>: ಮಾನವ-ಆನೆ ಸಂಘರ್ಷದಿಂದಾಗಿ ಶ್ರೀಲಂಕಾ, ವಿಶ್ವದಲ್ಲೇ ಅತಿ ಹೆಚ್ಚು ಆನೆಗಳ ಸಾವುಗಳನ್ನು ದಾಖಲಿಸಿರುವ ರಾಷ್ಟ್ರವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.</p>.<p>ಇತ್ತೀಚೆಗೆ ನಡೆದ ದ್ವೀಪರಾಷ್ಟ್ರದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಕೊಪಾ) ಸಭೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಇದರ ಜತೆಗೆ, ಈ ಸಂಘರ್ಷದಲ್ಲಿ ಮಾನವನ ಸಾವಿನ ಸಂಖ್ಯೆಯಲ್ಲಿ ಜಾಗತಿಕವಾಗಿ ಭಾರತದ ನಂತರ ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ ಎಂದು ಡೈಲಿ ನ್ಯೂಸ್ ವರದಿ ಮಾಡಿದೆ.</p>.<p>ಈ ಹಿನ್ನೆಲೆಯಲ್ಲಿ ಖ್ಯಾತ ಆನೆ ತಜ್ಞ, ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಪೃಥ್ವಿರಜ್ ಫರ್ನಾಂಡೊ ಅವರಿಂದ ಮಾನವ–ಆನೆ ಸಂಘರ್ಷದ ಬಗ್ಗೆ ವಿಶೇಷವಾಗಿ ಆಡಿಟ್ ಮಾಡಿಸುವಂತೆ ‘ಕೊಪಾ‘ ಆದೇಶಿಸಿದೆ.</p>.<p>ಸಿಒಪಿಇ (ಕೊಪೆ) ಸಮಿತಿ ಅಧ್ಯಕ್ಷ ತಿಸ್ಸಾ ವಿತರಣಾ ‘ಶ್ರೀಲಂಕಾದಲ್ಲಿ ಕಳೆದ 12 ತಿಂಗಳಿಂದ ನಡೆದಿರುವ ಮಾನವ– ಆನೆ ಸಂಘರ್ಷದಲ್ಲಿ ಒಟ್ಟು 407 ಆನೆಗಳು ಸಾವನ್ನಪ್ಪಿವೆ. ಕಳೆದ ವರ್ಷದ 272 ಆನೆಗಳು ಸಾವನ್ನಪ್ಪಿದ್ದವು. ಈ ವರ್ಷ ಆನೆಯ ದಾಳಿಯಿಂದ ಸತ್ತ ಮನುಷ್ಯರ ಸಂಖ್ಯೆ 85. ಕಳೆದ ವರ್ಷ 122 ಮಂದಿ ಸಾವನ್ನಪ್ಪಿದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಆನೆಗಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಮನುಷ್ಯರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ‘ ಎಂದು ಹೇಳಿದ್ದಾರೆ.</p>.<p>ವಿತರಣಾ ಮತ್ತು ಇತರ ಸದಸ್ಯರು, ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಾನವ– ಆನೆ ಸಂಘರ್ಷ ನಿಯಂತ್ರಿಸುವುದಕ್ಕಾಗಿ ವನ್ಯಜೀವಿ ವಿಭಾಗ ಹಾಗೂ ಇನ್ನಿತರ ಸೂಕ್ತ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಿ ಹೇಳಿದರು. ಈ ಸಂಘರ್ಷವನ್ನು ತಡೆಯುವುದಕ್ಕಾಗಿ ಪರಿಣಾಮಕಾರಿಯಾದ ಕಾರ್ಯಕ್ರಮವನ್ನು ರೂಪಿಸಬೇಕೆಂದು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>