ಮೂರು ಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗದುಕೊಂಡ ಪರಿಣಾಮ, 16 ಸಚಿವ ಸ್ಥಾನಗಳು ತೆರವಾಗಿವೆ. ಈ ಬೆಳವಣಿಗೆಯಿಂದಾಗಿ ದುರ್ಬಲಗೊಂಡಿರುವ ಮೈತ್ರಿಕೂಟದ ಏಕತೆಯನ್ನು ಕಾಪಾಡುವ ಸವಾಲು ಪ್ರಧಾನಿ ಪ್ರಚಂಡ ಅವರ ಮುಂದಿದ್ದು, ಇದೇ ಕಾರಣಕ್ಕಾಗಿ ಅವರು ಸಂಪುಟ ಪುನರ್ರಚನೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.